ಬೆಳ್ಳಕ್ಕಿಸಾಲು- ನಾಟಕ

Author : ಬಸವರಾಜ ಸಬರದ

Pages 108

₹ 12.00




Year of Publication: 1993
Published by: ವಿದ್ಯಾನಿಧಿ ಪ್ರಕಾಶನ
Address: ಗದಗ

Synopsys

‘ಬೆಳ್ಳಕ್ಕಿಸಾಲು’ ಲೇಖಕ ಡಾ. ಬಸವರಾಜ ಸಬರದ ಅವರ ನಾಟಕ. ಈ ಕೃತಿಗೆ ರಂಗಕರ್ಮಿ ಎಸ್. ಮಾಲತಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇದೊಂದು ಸುಂದರವಾದ ಗೀತ ನಾಟಕ. ಈ ನಾಟಕದಲ್ಲಿ ಪ್ರಕೃತಿ ಮಹತ್ವದ ಪಾತ್ರವಹಿಸುತ್ತದೆ. ಒಂದೆಡೆ ದರ್ಪ, ದಬ್ಬಾಳಿಕೆ, ವಿಷಯ ಲಂಪಟತೆ, ವೈಭವಗಳಿದ್ದರೆ, ಇನ್ನೊಂದೆಡೆ ಬಳ್ಳಿಗಾಶ್ರಯವಾದ ಮರಗಳು, ಗಿಳಿ, ಬೆಳ್ಳಕ್ಕಿಸಾಲು, ಹೊಳೆ ಹಳ್ಳಗಲು, ಗುಡ್ಡ ಬೆಟ್ಟಗಳು, ಕೇದಿಗೆಯ ಬನದಲ್ಲಿ ಸಂಚರಿಸುವ ಕವಿ ಮತ್ತು ರಾಜಕುಮಾರಿಯರಿದ್ದಾರೆ. ಪ್ರೀತಿಯಂತಹ ಮೌಲ್ಯಕ್ಕಾಗಿ ಸ್ವಯಂವರವನ್ನೇ ದಿಕ್ಕರಿಸುವ ರಾಜಕುಮಾರಿ, ತನ್ನನ್ನೇ ಅರ್ಪಿಸಿಕೊಳ್ಳುವ ಕವಿ ಗಮನ ಸೆಳೆಯುತ್ತಾರೆ. ಪ್ರಕೃತಿಯಲ್ಲಿ ಕವಿಯ ನಿರಂತರತೆಯನ್ನು ಗುರುತಿಸಿರುವ ಡಾ. ಸಬರದ ಅವರು ತುಂಬ ಕಾವ್ಯಾತ್ಮಕವಾಗಿ ಈ ನಾಟಕವನ್ನು ರಚಿಸಿದ್ದಾರೆ. ರಂಗದ ಹೊಸ ಸಾಧ್ಯತೆಗಳನ್ನಳವಡಿಸಿಕೊಳ್ಳುವಲ್ಲಿ ನಾಟಕ ಚಾಲೇಂಜನ್ನು ನೀಡುತ್ತದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books