ವಖಾರಿಧೂಸ

Author : ಡಿ.ಎಸ್.ಚೌಗಲೆ

Pages 104

₹ 100.00




Year of Publication: 2022
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೆ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

ಜನರ ಬದುಕನ್ನು ಅತ್ಯಂತ ಹತ್ತಿರದಿಂದ ಕಂಡುಂಡ ಅನುಭವವನ್ನು ಆಧಾರಿಸಿದ ನಾಟಕ ಡಿ.ಎಸ್. ಚೌಗಲೆ ಅವರ ‘ ವಖಾರಿಧೂಸ’. ಇಲ್ಲಿ ತಂಬಾಕು ಉತ್ಪಾದಕರ, ಗೋದಾಮು, ಮಾಲೀಕರ ದರ್ಪ, ಶೋಷಣೆ, ಗತ್ತುಗಾರಿಕೆಗಳು ಹಾಗೂ ಅದರ ಸುತ್ತಮುತ್ತಲಿನ ಕಾರ್ಮಿಕರ ಇನ್ನೊಂದು ಬಗೆಯ ತೀವ್ರತೆಯ ಘಾಟನ್ನು ನಾವು ಕಾಣಬಹುದು. ವಖಾರಿ ಪದದ ಅರ್ಥ ‘ತಂಬಾಕನ್ನು ಶುಚಿಗೊಳಿಸುವ ಗೋದಾಮು. ಧೂಸ ಎಂದರೆ ಅಲ್ಲಿನ ಧೂಳು. ಇದನ್ನು ರೂಪಕವಾಗಿ ಬಳಸಿದ ಲೇಖಕರು ಜನರ ದನಿಯನ್ನು ರಂಗಕೃತಿಯಲ್ಲಿ ಎತ್ತಿಕೊಂಡಿದ್ದಾರೆ. ಕಾರ್ಮಿಕ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವ ಮಾಲೀಕವರ್ಗ, ಅದನ್ನು ದಿಟ್ಟವಾಗಿ ಎದುರಿಸುವ ಕಾರ್ಮಿಕರು, ಶೋಷಣೆಯ ಬಲೆಯ ಒಳಗೆ ಬೀಳುವ ಮುಗ್ಧೆಯರು, ಶೋಷಣೆ ತಡೆಯಲು ಮುಂದಾಗುವ ಬೀಡಿ ಮೊಹಮ್ಮದನ ಕೊಲೆ ಹೀಗೆ ಇಂತಹ ಹಲವಾರು ಘಟನೆಗಳನ್ನು ಈ ನಾಟಕವು ಆವರಿಸಿವೆ. ಸಾಂಗ್ಯಾಬಾಳ್ಯಾ ನಾಟಕದ ತಾಲೀಮು ನಾಟಕಕ್ಕೆ ಹಿನ್ನೆಲೆಯಾಗಿ ಸಮಾನಾಂತರ ಕತೆಯಾಗಿ ಕಾಣುತ್ತದೆ. ಬೇರೆ ಬೇರೆ ಪ್ರದೇಶಗಳ ಭಾಷಾ ಸೊಗಡು ಇಲ್ಲಿನ ವಿಚಾರಧಾರೆಗಳನ್ನು ಎತ್ತಿಹಿಡಿಯುತ್ತಿದ್ದು, ಹಳೇ ಮೈಸೂರು, ಹುಣಸೂರು, ಪಿರಿಯಾಪಟ್ಟಣ ಹಳ್ಳಿ ಸೊಗಡಿನ ಭಾಷೆ ಬಳಸಿರುವುದು ವಸ್ತುವನ್ನು ಇನ್ನಷ್ಟು ಹತ್ತಿರವಾಗಿಸಿರುವುದನ್ನು ಕಾಣಬಹುದು. ನೆಲಮೂಲದ ಜನರ ಪ್ರತಿರೋಧದ ದನಿಯಾಗಿ ಈ ಕೃತಿ ಅವರ ಭಾಷೆಯಲ್ಲೇ ಮೂಡಿಬಂದಿದೆ.

About the Author

ಡಿ.ಎಸ್.ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು.  1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...

READ MORE

Related Books