ಚಾರ್ವಾಕ

Author : ಸತ್ಯನಾರಾಯಣರಾವ್ ಅಣತಿ

Pages 72

₹ 40.00




Year of Publication: 1979
Published by: ನವಕರ್ನಾಟಕ ಪ್ರಕಾಶನ
Address: #  ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು - 560 001
Phone: 080-22203580

Synopsys

ಲೇಖಕ ಸತ್ಯನಾರಾಯಣ ರಾವ್ ಅಣತಿ ಅವರ ನಾಟಕ ಕೃತಿ ‘ಚಾರ್ವಾಕ’. ಕೃತಿಗೆ ಮುನ್ನುಡಿ ಬರೆದ ಮಾ. ವರದರಾಜು ‘ಮೂಲತಃ ಅಣತಿ ಒಬ್ಬ ಸೃಜನಶೀಲ ಸಂವೇದನೆಯ ಕವಿ. ಆದರೆ ಅವರ ಸಂವೇದನೆ ಕೇವಲ ರಮ್ಯ ಸುಕುಮಾರ ಭಾವಗಳಿಗೆ ಸೀಮಿತವಾಗದೆ, ಪ್ರಜ್ಞೆಯ ಸ್ತರದಲ್ಲಿ ಸಮಾಜಮುಖಿಯಾಗಿದೆ. ಸಮಾನತೆ, ಸ್ವಾತಂತ್ಯ, ಜಾತಿ ವಿರೋಧ, ಶೋಷಿತರ ಮೇಲಿನ ದಬ್ಬಾಳಿಕೆ ವಿರೋಧಿ ನಿಲುವಿನೊಂದಿಗೆ, ಮಾನವತಾ ಧರ್ಮದೊಂದಿಗೆ ಅನುಸಂಧಾನ ನಡೆಸುತ್ತ, ಬಲಪಂಥೀಯ ಧೋರಣೆಗಳಿಗೆ ಮುಖಾಮುಖಿಯಾಗಿ ನಿಂತ ಪ್ರಗತಿಗಾಮಿ ಚಿಂತಕ. ಹೀಗಾಗಿ ಕವಿಹೃದಯದಿಂದ ಸಮಾಜದ ವಾಸ್ತವತೆಯನ್ನು ಅರ್ಥೈಸಿಕೊಳ್ಳುತ್ತ, ಪ್ರಜ್ಞಾ ನಿಲುವಿನಲ್ಲಿ ಚಿಂತಿಸಿದವರು. ಅವರು 'ಚಾರ್ವಾಕ' ರಚಿಸಿದಾಗ ಅವರಿಗೆ ಹದಿಹರೆಯದ ತಾರುಣ್ಯ-ಎಪ್ಪತ್ತರ ದಶಕದ ಕೊನೆಯ ವರುಷಗಳು - ಬಹುಮುಖಿ ಚಿಂತನೆ, ಪ್ರಭಾವಗಳ ಪ್ರವಾಹವೇ ಹರಿದುಬಂದು ರಾಜಕೀಯ, ಸಾಮಾಜಿಕ, ಸಾಹಿತ್ಯಿಕ ಸ್ಥಿತ್ಯಂತರ, ಪಲ್ಲಟಗಳಿಗೆ ಕಾರಣವಾಗಿದ್ದ ಕಾಲ. ‘ಚಾರ್ವಾಕ' ನಾಟಕ ತೀವ್ರಗಾಮಿಗಳ ಜೀವವಿರೋಧಿ ಕ್ರೂರತೆಯಲ್ಲಿ ನಲುಗಿದ ಮಾನವತೆಯ ಬಗೆಗಿನ ಅಣತಿಯವರ ಅಸೀಮ ಒಲವನ್ನು ವ್ಯಕ್ತಪಡಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಸತ್ಯನಾರಾಯಣರಾವ್ ಅಣತಿ
(12 December 1935)

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ.  ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...

READ MORE

Related Books