ಟೊಳ್ಳುಗಟ್ಟಿ ಅಥ್ವಾ ಮಕ್ಕಳಿಸ್ಕೂಲ್ ಮನೇಲಲ್ವೇ?

Author : ಟಿ.ಪಿ. ಕೈಲಾಸಂ

Pages 69




Year of Publication: 1922
Published by: ಅಮೆಚ್ಯೂರ್ ಡ್ರಾಮೆಟಿಕ್ ಅಸೋಷಿಯೇಶನ್
Address: ಬೆಂಗಳೂರು

Synopsys

ಟೊಳ್ಳುಗಟ್ಟಿ ಅಥ್ವಾ ಮಕ್ಕಳಿಸ್ಕೂಲ್ ಮನೇನಲ್ವೇ?-ಈ ನಾಟಕದ ಕರ್ತೃ-ಗುಂಡೂ (ಟಿ.ಪಿ.ಕೈಲಾಸಂ). ಮಧ್ಯಮ ವರ್ಗದ ಆಡುನುಡಿಯನ್ನು ಯಥಾವತ್ತಾಗಿ ಬಿಂಬಿಸಿದ್ದಲ್ಲದೇ, ಮಧ್ಯಮ ವರ್ಗದ ಜನರ ಆಸಕ್ತಿಯನ್ನು ಸಂಪೂರ್ಣವಾಗಿ ದೃಶ್ಯ ಕಾವ್ಯವಾಗಿ ತೋರಿದ್ದಕನ್ನಡದ ಮೊದಲ ನಾಟಕ.

ನಾಟಕದ ವಿವಿಧ ಪಾತ್ರಗಳ ಮೂಲಕ ಮಾನವನ ಸಹಜ ವ್ಯಕ್ತಿತ್ವದ ಗುಣಗಳನ್ನು ತೋರುತ್ತದೆ. ನಾಟಕದಲ್ಲಿ ತೋರಿದಂತೆ ಪುಟ್ಟ ಪಾತ್ರವು ಟೊಳ್ಳಾಗಿದೆ, ಮಾಧು ಪಾತ್ರವು ಗಟ್ಟಿಯಾಗಿದೆ ಮತ್ತು ಹಿರಣ್ಯಯ್ಯ ಪಾತ್ರ ಟೊಳ್ಳುಗಟ್ಟಿಯಾಗಿದೆ . ಮಕ್ಕಳ ಮೊದಲ ಶಾಲೆಯೇ ಮನೆ ಎಂಬುದನ್ನು ತೋರಿದ್ದು ಉತ್ತಮ ವಸ್ತುವೂ ಹೌದು ಮತ್ತು ಈ ನಾಟಕದ ಹೆಗ್ಗಳಿಕೆಯೂ ಹೌದು.ನೈಜ ಶಿಕ್ಷಣದ ಮಾದರಿಯೊಂದನ್ನು ಈ ನಾಟಕ ಕಟ್ಟಿಕೊಡುತ್ತದೆ.

1920ರಲ್ಲಿ ಬರೆದ ಈ ನಾಟಕ ಆಧರಿಸಿ, ಇಂದಿನ ಪರಿಕಲ್ವಪನೆಗೆ ಒಗ್ಗಿಸಿ, ಗುರುದತ್ ಅವರು ಕನ್ನಡದ ಚಲನಚಿತ್ರ -‘ಮೂಕವಿಸ್ಮಿತ’ ನಿರ್ದೇಶಿಸಿದ್ದಾರೆ. 

About the Author

ಟಿ.ಪಿ. ಕೈಲಾಸಂ
(26 July 1885 - 23 November 1946)

ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...

READ MORE

Related Books