ಶ್ರೀಕೃಷ್ಣ ಪಾರಿಜಾತ

Author : ಬೆಳ್ಳಾವೆ ನರಹರಿಶಾಸ್ತ್ರಿ

Pages 126

₹ 0.00




Year of Publication: 1932
Published by: ಬೆಳ್ಳಾವೆ ಪುಸ್ತಕಾಲಯ
Address: ಬಳೇಪೇಟೆ, ಬೆಂಗಳೂರು ನಗರ.

Synopsys

ಬೆಳ್ಳಾವೆ ನರಹರಿ ಶಾಸ್ತ್ರಿಗಳು ರಚಿಸಿದ ನಾಟಕ-ಶ್ರೀ ಕೃಷ್ಣ ಪಾರಿಜಾತ. ಜೀತೆಂದ್ರರು, ತಪಸ್ವಿಗಳೂ ಸಹ ಮಾಯೆಯ ಮೋಡಿಗೆ ಒಳಗಾದವರೇ. ಆ ಪೈಕಿ ನಾರದ ಮುನಿಗಳೂ ಹೊರತಲ್ಲ. ಇನ್ನೂ ಸಾಮಾನ್ಯ ಜನರ ಪಾಡೇನು? ಎಂಬ ವಿಚಾರವನ್ನು ಮಹಾ ಕವಿ ಶ್ರೀ ರುದ್ರ ಭಟ್ಟನು ತನ್ನ ಜಗನ್ನಾಥ ವಿಜಯದಲ್ಲಿ ಹೇಳಿರುವ ವಿಚಾರದ ಎಳೆ ಹಿಡಿದುಕೊಂಡೇ ಹಾಗೂ ಶ್ರೀಮದ್ ಭಾಗವತದ ವಿಚಾರಗಳೊಂದಿಗೆ ಸೇರಿಸಿ, ಶ್ರೀಕೃಷ್ಣ ಪಾರಿಜಾತದ ಒಟ್ಟು ಕಥೆಯನ್ನು ಹೆಣೆಯಲಾಗಿದೆ ಎಂದು ಲೇಖಕರು ಹೇಳಿದ್ದಾರೆ. ಶ್ರೀಕೃಷ್ಣ, ಬಲರಾಮ, ನಾರದ, ಮಕರಂದ, ರುಕ್ಮಿಣಿ, ಸತ್ಯಭಾಮೆ, ರಂಭೆ, ಊರ್ವಶಿ, ದೇವೇಂದ್ರ, ಮನ್ಮಥ, ಈಶ್ವರ, ಬ್ರಹಸ್ಪತಿ ಪಾತ್ರಗಳು, ಸಂಭಾಷಣೆ ದೃಷ್ಟಿಯಿಂದ ಪೌರಾಣಿಕ ನಾಟಕವೊಂದು ವಾಸ್ತವಾಂಶದ ಎಲ್ಲ ಲಕ್ಷಣಗಳನ್ನು ಪಡೆದುಕೊಂಡಿದೆ ಎಂಬಷ್ಟು ಪರಿಣಾಮಕಾರಿಯಾಗಿ ಕಥೆ ಹೆಣೆಯಲಾಗಿದೆ.

About the Author

ಬೆಳ್ಳಾವೆ ನರಹರಿಶಾಸ್ತ್ರಿ
(21 September 1882 - 21 June 1961)

ನಾಟಕಗಳು ಇಲ್ಲದೇ ಸೊರಗಿದ್ದ ಕಾಲದಲ್ಲಿ, ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟು, ಕನ್ನಡಿಗರಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದವರು ನರಹರಿಶಾಸ್ತ್ರಿ. 1882 ಸೆಪ್ಟಂಬರ್‌ 21 ತುಮಕೂರಿನ ಬೆಳ್ಳಾವೆ ಗ್ರಾಮದಲ್ಲಿ ಜನಿಸಿದರು. 1901ರಲ್ಲೇ ’ಸ್ಯಮಂತಕೋಪಾಖ್ಯಾನ’ ನಾಟಕ ರಚನೆ. ಗುಬ್ಬಿ ವೀರಣ್ಣನವರ ಅಪೇಕ್ಷೆಯಂತೆ ರಚಿಸಿದ ನಾಟಕ ಶ್ರೀಕೃಷ್ಣ ಲೀಲಾ. ಗುಬ್ಬಿ ಕಂಪನಿಗೂ, ನಾಟಕಕಾರರಿಗೂ ತಂದುಕೊಟ್ಟ ಹೆಸರು. ನಂತರ ರಚಿಸಿದ್ದು ’ಸದಾರಮೆ, ಗುಲೇಬಕಾವಲಿ, ಕಂಸವಧೆ, ಲಂಕಾದಹನ, ರುಕ್ಮಿಣೀ ಸ್ವಯಂವರ, ಮಹಾತ್ಮ ಕಬೀರದಾಸ, ಜಲಂಧರ’ ಈ ನಾಟಕಗಳು ಗುಬ್ಬಿ ಕಂಪನಿಯಿಂದಲೇ ಪ್ರದರ್ಶನಗೊಂಡವು. ’ಶಂಕರವಿಜಯ, ದಶಾವತಾರ, ಸತೀ ಅನಸೂಯ, ಶಾಕುಂತಲ, ಪಾರಿಜಾತ, ಹೇಮರೆಡ್ಡಿ ಮಲ್ಲಮ್ಮ, ಪ್ರಭಾವತಿ ಮುಂತಾದ ನಾಟಕಗಳನ್ನು ಬರೆದರು. ಇವರ ...

READ MORE

Related Books