ಕರ್ಣಾಮೃತ

Author : ಗೌರೀಶ ಕಾಯ್ಕಿಣಿ

Pages 102

₹ 6.00




Year of Publication: 1980
Published by: ಶ್ರೀರಾಘವೇಂದ್ರ ಪ್ರಕಾಶನ
Address: ಅಂಕೋಲಾ, ಉತ್ತರ ಕನ್ನಡ

Synopsys

‘ಕರ್ಣಾಮೃತ’ ಲೇಖಕ ಗೌರೀಶ ಕಾಯ್ಕಿಣಿ ಅವರ ರೇಡಿಯೋ ರೂಪಕಗಳ ಸಂಕಲನ. ಕೃತಿಯ ಕುರಿತು ಬರೆಯುತ್ತಾ ಸನ್ಮಿತ್ರ ಪ್ರಿಯ ಶ್ರೀ ವಿಷ್ಣುನಾಯ್ಕರ ಅನುಗ್ರಹದಿಂದಾಗಿ ನನ್ನ ಈ ಕೆಲವು ರೇಡಿಯೋ ರೂಪಕಗಳು ಇದೀಗ ಬೆಳಕು ಕಾಣುತ್ತಿವೆ. ಇವನ್ನು ಮೂಲದಲ್ಲಿ ಬರೆದು ಧಾರವಾಡ ಆಕಾಶವಾಣಿಯಿಂದ ಆಯಾಕಾಲಕ್ಕೆ ಬಿತ್ತರಿಸಿ ಕೆಲವು ವರ್ಷಗಳು ಸಂದವು. ಆದರೆ ಈ ಕಿವಿಯೆ ಬದುಕು ಹೀಗೆ ಕಣ್ಣಿನ ಬದುಕಾಗಿ ಹೊರಬರಲು ಶ್ರೀರಾಘವೇಂದ್ರ ಪ್ರಕಾಶನದ ಸಹಯೋಗವೇ ಕೂಡಿ ಬರಬೇಕಾಯಿತು. ಅದಕ್ಕಾಗಿ ನಾನು ನನ್ನ ಈ ಪ್ರಕಾಶಕ ಮಿತ್ರರಿಗೆ ಅನನ್ಯ ಋಣಿ ಎಂದಿದ್ದಾರೆ ಗೌರೀಶ ಕಾಯ್ಕಿಣಿ. ಜೊತೆಗೆ ಬಿಡಿ ಬಿಡಿಯಾಗಿ ಈ ರೂಪಕಗಳ ಬಗೆಗೆ ಬೇರೆ ಏನೂ ಹೇಳಬೇಕಾಗಿಲ್ಲ, ಇಲ್ಲಿಯ ದೇವಿ ಕಂಡ ಬೆಳಕು 1930ರ ನಮ್ಮ ಜಿಲ್ಲೆಯ ಸಿದ್ಧಾಪುರ ಸೀಮೆಯ ಕರನಿರಾಕರಣೆಯ ವೀರ ಯುಗದ ಒಂದು ಹೃದಯಸ್ಪರ್ಶಿಯಾದ ಘಟನೆಯನ್ನು ನಿರೂಪಿಸುತ್ತದೆ. ಕರ್ಣಾಮೃತ ಏಕಾಂಕ ನಾಟಕ ಮೊದಲು ರಚಿಸಿದ್ದು, ಆ ಮೇಲೆ ಆಕಾಶವಾಣಿಯ ಬಗ್ಗೆ ವಿಶೇಷವಾಗಿ ರೂಪಿಸಿಕೊಳ್ಳಬೇಕಾಯಿತು. ಶಿವಯೋಗ ಸಿದ್ಧಿಯ ಕಥಾಬೀಜ ನನ್ನದಲ್ಲ, ಕೌಂಟಲಿಯೋ ಟಾಲಸ್ಟಾಯಯ ಒಂದು ಕಥೆಯಿಂದ ಗೋಕರ್ಣ ಕ್ಷೇತ್ರಯಾತ್ರೆಯ ಈ ಮಹಾಪರ್ವಕ್ಕೆ ಅಳವಡಿಸಿಕೊಂಡಾಗಿದೆ. ಎಲ್ಲಾ ರೂಪಕಗಳನ್ನು ನನ್ನಿಂದ ಬರೆಯಿಸಿಕೊಂಡು ಬಿತ್ತರಿಸಿದ್ದಲ್ಲದೆ ಬಹುಕಾಲದ ನಂತರ ಪ್ರಕಟಣೆಗಾಗಿ ನನಗೆ ಅವುಗಳ ಕರಡು ಒದಗಿಸಿಕೊಟ್ಟ ಧಾರವಾಡ ಆಕಾಶವಾಣಿಯ ವರಿಷ್ಠರ ಈ ಮಹದುಪಕಾರವನ್ನು ನಾನು ಮನ್ನಿಸಿದಷ್ಟು ಕಡಿಮೆಯೇ ಎಂದಿದ್ದಾರೆ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books