ಬಿರುಗಾಳಿ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 90

₹ 89.00




Year of Publication: 2012
Published by: ಉದಯರವಿ ಪ್ರಕಾಶನ
Address: 1354/1 ಕೃಷ್ಣಮೂರ್ತಿಪುರಂ, ಮೈಸೂರು 570004
Phone: 0821 2332971

Synopsys

ಒಂಬತ್ತು ದೃಶ್ಯಗಳನ್ನು ಹೊಂದಿರುವ ಬಿರುಗಾಳಿ ನಾಟಕವು 1930ರಲ್ಲಿ ಮೊದಲ ಬಾರಿಗೆ ಉದಯ ರವಿ ಪ್ರಕಾಶನದಿಂದ ಪ್ರಕಟವಾಯಿತು. ಈ ನಾಟಕವು ಈವರೆಗೆ ಎಂಟಕ್ಕೂ ಹೆಚ್ಚು ಪ್ರಕಟಣೆಗಳನ್ನು ಕಂಡಿದೆ. ಈ ನಾಟಕವು ಷೇಕ್ಸ್ ಪಿಯರ್ ಇಂಗ್ಲೀಷ್‍ನಲ್ಲಿ ಬರೆದಂತಹ ಟೆಂಪೆಟ್ಸ್ ನಾಟಕದ ರೂಪಾಂತರ. ಒಟ್ಟು ಹದಿಮೂರು ಪಾತ್ರಗಳನ್ನು ಹೊಂದಿರುವ ನಾಟಕವಿದು. ಈ ನಾಟಕದಲ್ಲಿರುವ ಪದ್ಯದ ಮೂಲವು ರಗಳೆಯಲ್ಲಿದೆ. ಪ್ರತೀ ರಗಳೆಯ ಅಂತ್ಯದಲ್ಲಿರುವ ಪ್ರಾಸವನ್ನು ತೆಗೆದುಹಾಕಿದಲ್ಲಿ ಕುವೆಂಪು ಅವರು ಬರೆದಿರುವಂತಹ ಪದ್ಯಗಳ ತಳಹದಿ ಸಿಗುತ್ತದೆ. ಮೊದಲೇ ಚಾಲ್ತಿಯಲ್ಲಿದ್ದ ಇಂತಹ ಸರಳ ರಗಳೆಗಳನ್ನು ಮೊದಲ ಬಾರಿಗೆ ನಾಟಕಗಳಿಗೆ ಉಪಯೋಗಿಸಿಕೊಂಡವರು ಕುವೆಂಪು ಅವರು. ಯಾವುದೇ ಪ್ರಾಸದ ನಿರ್ಬಂಧವಿಲ್ಲದೇ ಇರುವುದರಿಂದ ಇಲ್ಲಿನ ಪದ್ಯಗಳು ಗದ್ಯದಂತೆ ಸರಾಗವಾಗಿ ಓದಬಹುದು. ಅಂದಹಾಗೇ, ಇದು ಟೆಂಪೆಟ್ಸ್ ನಾಟಕದ ಅನುವಾದವಲ್ಲ, ರೂಪಾಂತರವೆನ್ನಬಹುದು. ಇಲ್ಲಿ ಮೂಲ ಗ್ರಂಥವನ್ನು ಓದಿದ ನಂತರ ಕುವೆಂಪು ಅವರಲ್ಲಿ ಮೂಡಿದಂತಹ ಭಾವನೆಗಳನ್ನು ಮತ್ತು ಭಾವವನ್ನು ಆದಾರವಾಗಿಟ್ಟುಕೊಂಡು ರಚಿಸಿದಂತಹ ನಾಟಕ. ಟೆಂಪೆಟ್ಸ್ ನಾಟಕವು ಬಿರುಗಾಳಿ ನಾಟಕದ ಮೂಲ ಪ್ರೇರಣೆ ಎಂದು ಹೇಳಬಹುದು. ಒಟ್ಟಿನಲ್ಲಿ ಇಲ್ಲಿ ಬಳಸಿದಂತಹ ಭಾಷೆಯನ್ನು ಸಂವಾದ ರೂಪದ ಕಾವ್ಯವೆಂದು ಬಣ್ಣಿಸಬಹುದು.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books