ಬಲಿದಾನ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 28

₹ 30.00




Year of Publication: 2005
Published by: ಉದಯರವಿ ಪ್ರಕಾಶನ
Address: 1354/1 ಕೃಷ್ಣಮೂರ್ತಿಪುರಂ, ಮೈಸೂರು 570004
Phone: 0821 2332971

Synopsys

1948ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡು ನಂತರ ನಾಲ್ಕಕ್ಕಿಂತಲೂ ಹೆಚ್ಚು ಬಾರಿ ಮರು ಮುದ್ರಣಗೊಂಡಂತಹ ನಾಟಕ ಬಲಿದಾನ. ಮೊದಲು ಕಾವ್ಯಾಲಯ ಮೈಸೂರು, ಇಲ್ಲಿಂದ ಪ್ರಕಟಗೊಂಡ ಈ ಪುಸ್ತಕ ನಂತರ ುದಯರವಿ ಪ್ರಕಾಶನದಿಂದ ಪ್ರಕಟವಾಯಿತು. ಈ ನಾಟಕವು ಮೂರು ದೃಶ್ಯಗಳನ್ನು ಒಳಗೊಂಡಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಕಥಾವಸ್ತುವನ್ನು ಹೊಂದಿರುವ ಈ ನಾಟಕ ಜನಮನ್ನಣೆಗೆ ಪಾತ್ರವಾದ ನಾಟಕ. ಭಾರತ ಸುತ ಮತ್ತು ಭಾರತಾಂಬೆಯ ನಡುವೆ ನಡೆಯುವಂತಹ ಸನ್ನಿವೇಷವನ್ನು ಈ ನಾಟಕದಲ್ಲಿ ಬಹಳ ಸ್ವಾರಸ್ಯಕರವಾಗಿ ವಿವರಿಸಲಾಗಿದೆ. ಪರಕೀಯರ ದಾಳಿಯಿಂದ ನಲುಗಿದ ಭಾರತಾಂಬೆ ತನ್ನ ಸಂಕಟವನ್ನು ಹೊರಹಾಕುವಂತಹ ಮೊದಲ ದೃಶ್ಯ ಭಾರತದಲ್ಲಿ ಆಂಗ್ಲರ ಆಳ್ವಿಕೆಯ ಭೀಕರತೆಯನ್ನು ಓದುಗರಿಗೆ ವಿವರಿಸುತ್ತದೆ. ಭರತಸುತ ಪಾತ್ರ ಪ್ರತಿಯೊಬ್ಬ ಭಾರತೀಯನನ್ನು ಧೃಷ್ಟಿಯಲ್ಲಿಟ್ಟುಕೊಂಡು ಬರೆದಂತಹ ಪಾತ್ರವಾಗಿ ಕಂಡುಬರುತ್ತದೆ. ಎರಡನೇ ದೃಶ್ಯದಲ್ಲಿ ಭಾರತಾಂಬೆಯನ್ನು ವರ್ಣಿಸುವ ವಂದೇ ಮಾತರಂ ಗೀತೆಯ ಸ್ಪಷ್ಟವಾದ ಭಾವಾರ್ಥವನ್ನು ವಿವರಿಸಲಾಗಿದೆ. ಸ್ವಾತಂತ್ರ್ಯಕ್ಕಾಗಿ ಮಡಿದವರ ಪ್ರತಿಯಾಗಿ ನಾಟಕದಲ್ಲಿ ಬರುವಂತಹ ಛಾಯಾಧ್ವನಿ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ಪ್ರತಿನಿಧಿಯಾಗಿ ಈ ನಾಟಕದಲ್ಲಿ ಓದುಗರೆದುರು ನಿಲ್ಲುತ್ತದೆ. ಅಂತಿಮ ದೃಶ್ಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದುದರ ನಿರೂಪಣೆ ಪ್ರತಿಯೊಬ್ಬ ಓದುಗರಿಗೂ ಭಾವಪರವಶರನ್ನಾಗಿ ಮಾಡುತ್ತದೆ.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books