‘ನಾವೂ ನೀವೂ ಫ್ರೆಂಡ್ಸ್ ಅಲ್ವಾ ?!’ ಕಿಶೋರ ಸಾಹಿತಿ ಅಂತಃಕರಣನ ನಾಟಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ನಡೆಸಿದ ನಾಟಕೋತ್ಸವಕ್ಕೆ ಆಯ್ಕೆಯಾಗಿ 10 ಪ್ರದರ್ಶನಗಳನ್ನು ಕಂಡಿದೆ.
ಮಕ್ಕಳನ್ನು ಕೇಂದ್ರವಾಗಿಸಿಕೊಂಡು ಮುಗ್ಧತೆಯ ಪರಿಧಿಯೊಳಗೆ ಕಟ್ಟಲ್ಪಟ್ಟ ಶಾಂತಿಯ ಆಶಯಾಭಿವ್ಯಕ್ತಿಯ ನವಿರುತನವಿದೆ. ನಾಟಕವು ಹುಸಿ ಬೌದ್ಧಿಕತೆಯನ್ನಾಗಲಿ, ಒಣ ಸೈದ್ಧಾಂತಿಕ ತರ್ಕವನ್ನಾಗಲಿ, ಶುಷ್ಕ ದಾರ್ಶನಿಕ ನಿರೂಪಣೆಗಳನ್ನಾಗಲಿ ಮುಂದಿಡದೇ ಲವಲವಿಕೆಯಿಂದ ಕೂಡಿದ ಮುಗ್ಧ ಪ್ರೇಮದ ಕಡೆಗಿನ ಒಲವನ್ನು ಸ್ಥಾಪಿಸುವ ಪ್ರಯತ್ನಕ್ಕೆ ಚಾಲನೆ ನೀಡಿದೆ.
ಕಲ್ಪಿತ ವಾಸ್ತವಗಳ ನಡುವೆ ವಾಸ್ತವವನ್ನು ಜೀವಂತವಾಗಿಡುವ ಸಾಹಿತ್ಯಕ ಚಾಕಚಕ್ಯತೆ, ಸೃಜನಶೀಲತೆ, ಕಲಾ ನಿರ್ವಹಣೆಯು ಅಂತಃಕರಣನೆಂಬ ನಾಟಕಕಾರನಿಗೆ ಪರಿಪೂರ್ಣವಾಗಿ ಈ ನಾಟಕದ ರಚನೆಯಲ್ಲಿ ದಕ್ಕಿದೆ.
©2024 Book Brahma Private Limited.