ದ್ವಂದ್ವ

Author : ಸೋಮು ರೆಡ್ಡಿ

Pages 56

₹ 75.00




Year of Publication: 2020
Published by: ಅನುರೂಪ ಬುಕ್ಸ್‌ & ಮೀಡಿಯಾ
Address: ಪಂಚಾಕ್ಷರಿ ನಗರ, ನವನಗರ, ಹುಬ್ಬಳ್ಳಿ- 580025

Synopsys

ಲೇಖಕ ಸೋಮು ರೆಡ್ಡಿ ಅವರ ನಾಟಕ ಕೃತಿ ʻದ್ವಂದ್ವʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ವರ್ತಮಾನದ ಪರಿಮಳ ಅಂಟಿಕೊಂಡಿರದ ಯಾವುದೇ ವಿಷಯ ಮತ್ತು ವಿಚಾರವನ್ನು ಅಭಿವ್ಯಕ್ತಿಸಲೇಬಾರದೆಂಬ ನನ್ನ ನಿಲುವು ಒಡಮೂಡಲು ಕಾರಣ ನಮ್ಮ ಕನ್ನಡ ಪೂರ್ವಸೂರಿಗಳ ನಾಟಕಗಳ ಎಡಬಿಡದ ಅಧ್ಯಯನವೇ ಹೊರತು ಮತ್ಯಾವುದೂ ಅಲ್ಲ, ಸೃಜನಶೀಲ ಅಭಿವ್ಯಕ್ತಿ ಆಯಾ ಕಾಲ, ದೇಶ, ಪರಿಸರದ ಅನುಗುಣವಾಗಿ ವಸ್ತು ಮತ್ತು ಕಥನ ಕಟ್ಟಿ ಸಾಹಿತ್ಯವಾಗಿ ರೂಪುಗೊಂಡ ಕೃತಿ ಕಾಲಕ್ಕೆ ತಕ್ಕಹಾಗೆ ಪ್ರತಿಕ್ರಿಯಿಸುತ್ತಾ ಸಮಕಾಲೀನವಾಗಿರುವ ಮತ್ತು ಆಯಾ ವಸ್ತುವಿಷಯದ ಸತ್ವ-ಸ್ವಾರಸ್ಯದ ಮೇಲೆ ಸಾರ್ವಕಾಲಿಕವಾಗಿರುವ ಹಲವಾರು ನಿದರ್ಶನಗಳು ನಮ್ಮ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾಣಸಿಗುತ್ತವೆ. ನಮ್ಮ ನಿತ್ಯ ಬದುಕಿನ ದಂದುಗ, ರಗಳೆ-ರಾದ್ದಾಂತ, ರೋಗ-ರುಜಿನ, ಸಂಘರ್ಷ, ಆಸೆ, ಆಕರ್ಷಣೆ, ಪ್ರೀತಿ, ವ್ಯಾಮೋಹ, ಮಮತೆ, ಕರುಣೆ ಈ ಎಲ್ಲವನ್ನೂ ಸಂಕಲಿಸಿದ ನಾಟಕ ದ್ವಂದ್ದ” ಎಂದು ಹೇಳಿದ್ದಾರೆ.

About the Author

ಸೋಮು ರೆಡ್ಡಿ
(06 January 1987)

ಯುವ ಬರಹಗಾರ ಸೋಮು ರೆಡ್ಡಿ ಮೂಲತಃ ಬಾಗಲಕೋಟೆ ಜಿಲ್ಲೆಯ ಕೇಸನೂರ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿಎ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ನೇಮಕಾತಿ ಹೊಂದಿ ಹನ್ನೆರಡು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಪ್ರಮುಖ ಕೃತಿಗಳೆಂದರೆ ಅಭಿನೇತ್ರಿ (ಕಾದಂಬರಿ), ನೋಟದಾಗ ನಗೆಯಾ ಮೀಟಿ (ಕಥಾ ಸಂಕಲನ), ತಲಾಷ್ (ನಾಟಕ) ಇವರ ಪ್ರಕಟಿತ ಕೃತಿಗಳಾಗಿವೆ. ಇವರಿಗೆ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿ, ಕ್ರಾಂತಿ ಪುರಸ್ಕಾರ, ಶ್ರೀ ಮಹಿಮಾ ಕೌಸ್ತುಭ ಪುರಸ್ಕಾರ, ಚೇತನ ಸಾಹಿತ್ಯ ಪುರಸ್ಕಾರ, ಜೇಂಟ್ಸ್ ...

READ MORE

Related Books