ತಿರಕರ ಪಿಡುಗು

Author : ಬೆಟಗೇರಿ ಕೃಷ್ಣಶರ್ಮ (ಆನಂದಕಂದ)

Pages 88




Year of Publication: 1930
Published by: ಜಯಕರ್ಣಾಟಕ ಗ್ರಂಥಮಾಲೆ
Address: ಧಾರವಾಡ.

Synopsys

ಬೆಟಗೇರಿ ಕೃಷ್ಣಶರ್ಮ ಹಾಗೂ ಗೆಳೆಯರ ಗುಂಪಿನ ಕೃಷ್ಣಕುಮಾರ ಕಲ್ಲೂರು ಅವರು ‘ತಿರಕರ ಪಿಡುಗು’ ಸಂಪಾದಿಸಿದ್ದಾರೆ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ತಿರಕರ ಪಿಡುಗು, ಕೃಷ್ಣಕುಮಾರ ಕಲ್ಲೂರು ಅವರ ಹಾಳ್ ಗಂಡು ಮತ್ತು ರಾಯರ ಮದುವೆ ಕೃತಿಗಳು ಒಳಗೊಂಡಿವೆ. ಈ ನಾಟಕಗಳು ಹುಚ್ಚಾಟಗಳೇ ಎಂದು ಲೇಖಕರು ಅಭಿಪ್ರಾಯಪಟ್ಟು, ಹುಚ್ಚಾಟಗಳ ಭಾಷೆಯು ಆಡು ಭಾಷೆಯಾಗಿಸುವುದೇ ಮೇಲು ಎಂದೂ ಸಮರ್ಥಿಸಿಕೊಂಡಿದ್ದಾರೆ. ಮೊದಲೆರಡು ಹುಚ್ಚಾಟಗಳು ವ್ಯಂಗ್ಯಚಿತ್ರಗಳಂತೆ ಮತ್ತು ಸೂಕ್ಷ್ಮ ವಾದ ಅಣಕಗಳಂತಿವೆ. ಮೂರನೇ ಹುಚ್ಚಾಟವು ಬದುಕಿನ ಒಂದು ನಾಟಕ. ಧಾರವಾಡ ಪ್ರಾಂತದ ಹೊರಗಿನವರಿಗೆ ಇಲ್ಲಿಯ ಭಾಷೆಯ ಶಬ್ದಗಳು, ಪ್ರಯೋಗಗಳು ವಿಲಕ್ಷಣವಾಗಿ ತೋರಬಹುದು ಎಂದು ಹೇಳುವ ಮೂಲಕ ಹುಚ್ಚಾಟಗಳ ಭಾಷೆಯು ಪಕ್ಕಾ ದೇಸಿ ಎಂದು ಹೇಳಿದ್ದಾರೆ. ಸಾಹಿತ್ಯದ ಬೇರು ಆಡುಭಾಷೆಯಲ್ಲೇ ಬೆರೆತುಕೊಂಡಿದೆ ಎಂಬ ಭಾಷಾ ತಜ್ಞರ ಮಾತು ಇಲ್ಲಿಯ ಹುಚ್ಚಾಟಗಳ ಶ್ರೇಷ್ಠತೆಗೆ ಸಾಕ್ಷಿ ನುಡಿಯುತ್ತವೆ.

About the Author

ಬೆಟಗೇರಿ ಕೃಷ್ಣಶರ್ಮ (ಆನಂದಕಂದ)
(16 April 1900 - 30 October 1982)

ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ 1900ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..  ಕೃಷ್ಣಶರ್ಮರು 12ನೇ  ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ  ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು  ಹಾಗೂ  ಮರು ವರ್ಷವೇ ಪತ್ನಿ ತೀರಿ ಹೋದರು. 5ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ 5 ...

READ MORE

Related Books