ಆಹ್ವಾನ

Author : ನಿರಂಜನ

Pages 180

₹ 60.00




Year of Publication: 1967
Published by: ವಿಜಯ ಭಾರತೀ ಪ್ರಕಾಶನ
Address: 9/1, ಮೂರನೇ ಕ್ರಾಸ್, ನೆಹರೂ ನಗರ, ಬೆಂಗಳೂರು- 20

Synopsys

‘ಆಹ್ವಾನ’ ಒಂದು ನಾಟಕ ಮಾಲಿಕೆ. ನಿರಂಜನ ಅವರು ಈ ಕೃತಿಯನ್ನು ರಚಿಸಿದ್ದಾರೆ. ಕೃತಿಯ ವಸ್ತು ಭಾರತ. ಕವಿಗಳು ಹಾಡಿ ಹೊಗಳಿರುವ, ಇತಿಹಾಸಕಾರರು ಸಂಶೋಧಿಸಿ ಸಿದ್ಧಪಡಿಸಿರುವ ಭವ್ಯ ಭಾರತದ ಚಿತ್ರ ಚಿತ್ತಾಕರ್ಷಕವಾದದ್ದು, ಉತ್ತರದಲ್ಲಿ ಹಿಮಾಚ್ಛಾದಿತ ಪರ್ವತಾವಳಿ ಉಳಿದ ಹರಿಯುವ ನದಿ- ನದಗಳು ಕಣ್ಣು ತಣಿಸುವ ಹಸಿರು ಸಿರಿಯನ್ನು ಹೊತ್ತ ನೆಲ-ಇದೀಗ ಪುರಾಣಗಳಲ್ಲೂ ಇತಿಹಾಸದಲ್ಲೂ ಈ ದೇಶವನ್ನು ಕುರಿತು ಕಂಡುಬರುವ ಭೌಗೋಳಿಕ ವರ್ಣನೆ. ಇಲ್ಲಿ ಐದು ಸಾವಿರ ವರ್ಷಗಳಿಗೂ ಹಿಂದೆ ಸುಸಂಸ್ಕೃತ ಜನ ವಾಸವಾಗಿದ್ದರು. ನಾಗರಿಕತೆ ಪರಾಕಾಷ್ಠೆಯನ್ನು ಮುಟ್ಟಿತ್ತು. ಇಂತಹ ದೇಶವನ್ನು ಕಥಾವಸ್ತುವಾಗಿಸಿಕೊಂಡು ರಚಿತವಾಗಿರುವ ನಾಟಕ ಮಾಲಿಕೆ ಇದು.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books