ಹರಿಜನ್ವಾರ

Author : ಶ್ರೀರಂಗ (ಆದ್ಯ ರಂಗಾಚಾರ್ಯ)

Pages 102

₹ 0.00




Year of Publication: 1934
Published by: ಸಾಹಿತ್ಯ ಪ್ರಕಟನ ಮಂದಿರ
Address: ಸಾಧನಕೇರಿ, ಧಾರವಾಡ

Synopsys

ಶ್ರೀರಂಗ ಅವರು ಬರೆದ ನಾಟಕಗಳ ಪೈಕಿ -ಹರಿಜನ್ವಾರ ನಾಟಕವು ಬಹುವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ರಂಗಭೂಮಿಯ ಸೊಬಗು-ಸಾರ್ಥೈಕ್ಯವನ್ನು ಹೆಚ್ಚಿಸಿತ್ತು. ಆಚಾರ-ವಿಚಾರಗಳಿಗೆ ಸಂಬಂಧ ಇರಬೇಕು ಎಂಬ ಒತ್ತಾಸೆ ನಾಟಕದಲ್ಲಿ ಇದೆ. ಬ್ರಾಹ್ಮಣ ಎಂದು ಹೇಳಿಕೊಳ್ಳುವವರು, ಜನಿವಾರದ ಮೇಲೆ ಆಣೆ ಮಾಡುವವರು ಮೊದಲು ಜನಿವಾರದ ನಡುವೆ ಹುದುಗಿರುವ ಹೃದಯವನ್ನು ಪರೀಕ್ಷಿಸಿಕೊಳ್ಳಬೇಕು ಎಂಬ ಕ್ರಾಂತಿಕಾರಿ ಸಂದೇಶವೂ ಇದೆ. ಜಾತಿ ಹೆಗ್ಗಳಿಕೆಯ ಜನಕ್ಕೆ ಕೇವಲ ತೋರಿಕೆ ಬೇಕು, ತತ್ವ ಬೇಡ ಎಂಬ ವ್ಯಂಗ್ಯವೂ ಇದೆ. ಹೃದಯದಲ್ಲಿ ಪರಮಾತ್ಮನು ಇಲ್ಲದೇ ಹೋದರೆ ದೇಹಕ್ಕೆ ಅಂಟಿಕೊಳ್ಳುವ ಜನಿವಾರದ ಉಪಯೋಗವೇನು ಎಂದೂ ಲೇಖಕರು ನಾಟಕದ ಮೂಲಕ ಪ್ರಶ್ನಿಸುತ್ತಾರೆ.

‘ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ, ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ’ ಎಂದು ಕೇಳಿರುವ ಬಸವಣ್ಣನ ಪ್ರಶ್ನೆಯನ್ನು ಇಂದೂ ಕೇಳಿಕೊಳ್ಳಬೇಕಾಗಿದೆ ಎಂದೂ ಕೃತಿಗೆ ಬರೆದ ತಮ್ಮ ಮುನ್ನುಡಿಯಲ್ಲಿ ಗಮನ ಸೆಳೆದಿದ್ದಾರೆ.

About the Author

ಶ್ರೀರಂಗ (ಆದ್ಯ ರಂಗಾಚಾರ್ಯ)
(26 September 1904 - 17 October 1984)

ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...

READ MORE

Related Books