ಮುಂದಣ ಕಥನ

Author : ನಟರಾಜ ಹುಳಿಯಾರ್

Pages 74

₹ 80.00




Year of Publication: 2020
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

ಮಾನವೀಯ ವಚನ ಪರಂಪರೆಯನ್ನು ನಾಡಿನಾದ್ಯಂತ ಪಸರಿಸಲು ಹೊರಟ ಶರಣರ ಹೋರಾಟ-ಎದುರಿಸುವ ಅಡ್ಡಿಗಳನ್ನು ಸಮಕಾಲಿನ ತೆಕ್ಕೆಯಲ್ಲಿಟ್ಟು ರಚಿಸಿರುವ ನಾಟಕ ‘ಮುಂದಣ ಕಥನ’.

ರಂಗದ ಮೇಲೆ ಹಲವಾರು ಪ್ರದರ್ಶನಗಳನ್ನು ಕಂಡು ಜನರ ಮೆಚ್ಚುಗೆ ಗಿಟ್ಟಿಸಿದ  ನಟರಾಜ್ ಹುಳಿಯಾರ್ ಅವರ 'ಮುಂದಣ ಕಥನ' ನಾಟಕ ಹಿಂದಣ ಕಥೆಯಲ್ಲ. ಅದು 12ನೇ ಶತಮಾನವನ್ನು ಆದರ್ಶೀಕರಿಸುವುದಿಲ್ಲ; ಬದಲಿಗೆ ಪ್ರಸ್ತುತಗೊಳಿಸುತ್ತದೆ.

ವಚನ ಚಳವಳಿಗೆ ಎದುರಾದ ಬಿಕ್ಕಟ್ಟಿನ ಕಾಲದಲ್ಲಿ ವಚನಗಳನ್ನು ಹೊತ್ತು ಕನ್ನಡನಾಡಿನ ಮೂಲೆಮೂಲೆಗಳಿಗೆ ನಡೆದ ಜನರು, ವಚನಗಳ ಜ್ಞಾನವನ್ನು ಎಲ್ಲೆಡೆ ಹಬ್ಬಿಸಲು ಹೊರಟಾಗ ನಡೆದ ಸಂಚು ಹಾಗೂ ಕೊಲೆಗಳು ಆ ಕಾಲದಂತೆ ಎಲ್ಲ ಕಾಲಗಳಲ್ಲೂ ಹೆಜಿಮನಿಯ ಸಾಧನಗಳಾಗಿ ಮುಂದುವರಿಯುವುದನ್ನು ನಾಟಕ ಭಿನ್ನ ನೆಲೆಯಲ್ಲಿ ಅಭಿವ್ಯಕ್ತಿಸುತ್ತದೆ. ಶರಣರ ಆಂದೋಲನದ ಮತ್ತೊಂದು ಮಗ್ಗುಲನ್ನು ನಟರಾಜ್ ಹುಳಿಯಾರ್ ತುಂಬ ಗಂಭೀರವಾಗಿ ಮಂಡಿಸಿದ್ದಾರೆ. ಬಹುಶಃ ವಚನ ಚಳವಳಿಯನ್ನು ಇಷ್ಟು ಸಮಗ್ರವಾಗಿ ಈ ಹಿಂದಿನ ನಾಟಕಕಾರರಿಗೆ ಗ್ರಹಿಸಲು ಸಾಧ್ಯವಾಗಿರಲಿಲ್ಲ ಎನ್ನುವುದೇ 'ಮುಂದಣ ಕಥನ'ದ ಗಹನತೆಯನ್ನು ಸೂಚಿಸುತ್ತದೆ ಎಂದು ಕೃತಿಗೆ ಬೆನ್ನುಡಿ ಬರೆದ ರಾಜಪ್ಪ ದಳವಾಯಿ  ಪ್ರಶಂಸಿಸಿದ್ದಾರೆ.

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Related Books