ಅಗ್ನಿ ಮತ್ತು ಮಳೆ

Author : ಗಿರೀಶ ಕಾರ್ನಾಡ

Pages 88

₹ 70.00




Year of Publication: 2011
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿ ಭವನ, ಸುಭಾಸ ರಸ್ತೆ, ಧಾರವಾಡ-1
Phone: 98454 47002

Synopsys

ಪೌರಾಣಿಕ ಕಥಾವಸ್ತು ಹೊಂದಿರುವ ’ಅಗ್ನಿ ಮತ್ತು ಮಳೆ’ ನಾಟಕವು ಕಾರ್ನಾಡರ ಯಶಸ್ವಿ ನಾಟಕಗಳಲ್ಲಿ ಒಂದು. ಅಗ್ನಿ ಪೂಜಿಸುವ ಒಂದು ಸಮೂಹ. ನೀರು-ಮಳೆಯನ್ನು ಆರಾಧಿಸುವ ಮತ್ತೊಂದು ಸಮುದಾಯಗಳ ಸಂಘರ್ಷವನ್ನು ಕಟ್ಟಿಕೊಡುವ ನಾಟಕ.

ನಿಷಾಧರ ಹೆಣ್ಣು ’ನಿತ್ತಿಲೆ’ ಈ ನಾಟಕದ ಜೀವ-ಜೀವಾಳ. ಯಜ್ಞದ ಸುತ್ತ ಕತೆ ಹೆಣೆಯಲಾಗಿದೆಯಾದರೂ ಅಷ್ಟಕ್ಕೇ ಸೀಮಿತವಾಗಿಲ್ಲ. ನಾಟಕೀಯ ಅಂಶಗಳಿಗೆ ಈ ನಾಟಕದಲ್ಲಿ ಕೊರತೆಯೇನಿಲ್ಲ. ತೋರಿಕೆ ಮತ್ತು ಅಂತರ್‌ ಸಂಬಂಧಗಳನ್ನು ಮುಖಾಮುಖಿ ಆಗಿಸುವ ನಾಟಕ ಗಿರೀಶರ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

About the Author

ಗಿರೀಶ ಕಾರ್ನಾಡ
(19 May 1934 - 10 June 2019)

ನಾಟಕಕಾರ ಗಿರೀಶ್ ಕಾರ್ನಾಡ್ ಅವರು  ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ,  ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು. ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ  ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ  ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು.  ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ...

READ MORE

Conversation

Related Books