ಮೂರು ಬೀದಿನಾಟಕಗಳು

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 72

₹ 60.00




Year of Publication: 2004
Published by: ಅಭಿರುಚಿ ಪ್ರಕಾಶನ
Address: ನಂ.4, 2ನೇ ಪ್ಲೋರ್, ಸಿಟಿ ಕೆಎಸ್.ಆರ್.ಟಿ.ಸಿ. ಬಿಲ್ಡಿಂಗ್, ಕೆಆರ್. ಸರ್ಕಲ್, ಮೈಸೂರು-1

Synopsys

‘ಮೂರು ಬೀದಿನಾಟಕಗಳು’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ನಾಟಕ ಸಂಕಲನ. ಈ ಕೃತಿಗೆ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಬೆನ್ನುಡಿಯ ಬರಹವಿದೆ. ಕೆಂಡಮಂಡಲ(1990)ದ ಮೂಲಕ ಈಗಾಗಲೇ ನಾಟಕ ಕ್ಷೇತ್ರವನ್ನು ಪ್ರವೇಶಿಸಿರುವ ಮೂಡ್ನಾಕೂಡು ಚಿನ್ನಸ್ವಾಮಿಯವರು ಈಗಿನ ಅಂಗಭಂಗದಲ್ಲಿ ಪ್ರೇತಗಳನ್ನು ರಂಗದ ಮೇಲೆ ತಂದು, ಅಂಗಾಂಗ ವ್ಯಾಪಾರದಲ್ಲಿ ನಿರತನಾಗಿರುವ ಸ್ವಾರ್ಥಿ ಮನುಷ್ಯನ ದುಷ್ಟ ಪ್ರವೃತ್ತಿಯನ್ನು ಅವುಗಳ ಮೂಲಕ ಬಯಲಿಗೆಳೆಯುತ್ತಾರೆ. ಪ್ರತಿಯೊಂದು ಕಾರ್ಯದ ಹಿಂದಿರುವ ಸದುದ್ದೇಶ ಮತ್ತು ಸದ್ಭಾವನೆಗಳನ್ನು ಅರಿತು ಸದಾಚರಣೆಮಾಡುವ ಪ್ರೇರಣೆಯನ್ನು ಸಮರ್ಥಿಸುತ್ತಾರೆ. ‘ಅಪಘಾತ’ದಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಅನುಭವಗಳನ್ನು ಕ್ರೋಢೀಕರಿಸಿ ಹಾಸ್ಯ, ವ್ಯಂಗ್ಯಗಳ ಧಾಟಿಯಲ್ಲಿ ಬೇಜವಾಬ್ದಾರಿ ವ್ಯಕ್ತಿಗಳ ನಿಷ್ಕರುಣ ನಡೆಯನ್ನು ಸರಕಾರಿ ನಿಯಮಗಳ ಕುರುಡು ವ್ಯವಹಾರವನ್ನು ಕಾನೂನುಗಳ ಅಮಾನವೀಯ ಅರ್ಥಾನ್ವೇಷಣೆಯನ್ನು ಪರೋಕ್ಷವಾಗಿ ತೆಗಳುತ್ತಾ, ಸಹಜ ಸಜ್ಜನಿಕೆಯಿಂದ ಬದುಕನ್ನು ಕಟ್ಟುವ ಬಗ್ಗೆ ಹೇಳುತ್ತಾರೆ. ಬಹಿಷ್ಕಾರ ಶೋಷಣೆಯ ಇನ್ನೊಂದು ಮುಖವನ್ನು ಬಯಲಿಗೆಳೆಯುತ್ತಾ ಅಂತಃಕರಣವನ್ನು ತಟ್ಟುತ್ತದೆ. ನಾಟಕಕ್ಕೆ ಪ್ರಾಣ ಸದೃಶ್ಯವಾದ ಸಂಭಾಷಣೆಗಳಲ್ಲಿ ಕಥೆ ಕಟ್ಟುವ ಚಿನ್ನಸ್ವಾಮಿಯವರು ತಮ್ಮ ಅನುಭವಗಳನ್ನು ಇನ್ನಷ್ಟು ನಾಟ್ಯಾಯಮಾನಗೊಳಿಸುವಂತಾಗಲಿ ಎಂದು ಸಿದ್ಧಲಿಂಗ ಪಟ್ಟಣಶೆಟ್ಟಿ ಆಶಿಸಿದ್ದಾರೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books