ಆಕಾಶ ನಾಟಕಗಳು

Author : ಗೌರೀಶ ಕಾಯ್ಕಿಣಿ

Pages 66

₹ 5.00




Year of Publication: 1982
Published by: ಅಕ್ಷರ ಪ್ರಕಾಶನ
Address: ಸಾಗರ, ಶಿವಮೊಗ್ಗ, ಕರ್ನಾಟಕ ರಾಜ್ಯ

Synopsys

‘ಆಕಾಶ ನಾಟಕಗಳು’ ಗೌರೀಶ ಕಾಯ್ಕಿಣಿ ಅವರ ನಾಟಕ ಸಂಕಲನ. ಈ ಕೃತಿಗೆ ಶಿವರಾಮ ಕಾರಂತ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ದೀರ್ಘಕಾಲದಿಂದ ವ್ಯವಸಾಯ ಮಾಡುತ್ತ ಬಂದವರು ಈ ಸಂಕಲನದ ಲೇಖಕರಾದ ಗೌರೀಶ ಕಾಯ್ಕಿಣಿಯವರು. ಅವರು ಬಹಳ ಹಿಂದಿನಿಂದಲೂ ಪತ್ರಿಕೆಗಳಿಗೆ ವಿಶೇಷ ಬರಹಗಳನ್ನು ಕಳುಹಿಸುತ್ತಿದ್ದಂತೆ ಸಾಹಿತ್ಯವನ್ನು ಕುರಿತು ಅಭ್ಯಾಸಪೂರ್ಣವಾದ ವಿಮರ್ಶೆಗಳನ್ನು ಬರೆಯುತ್ತ ಬಂದಿದ್ದಾರೆ. ವಿವಿಧ ವಿಷಯಗಳನ್ನು ಕುರಿತು ಅಭ್ಯಾಸಶೀಲ ಜೀವನ ಅವರದ್ದು, ಅವರು ಬರೆದ ಹಲವಾರು ಕೃತಿಗಳಲ್ಲಿ, ಬಾನುಲಿಯ ಸಲುವಾಗಿ ಅವರು ರಚಿಸಿರುವ ಕೆಲವೊಂದು ಕಿರುನಾಟಕಗಳು ಪ್ರಕಟವಾಗದೆ ಉಳಿದಿವೆ. ಈಗ ಅವನ್ನು ಒಂದು ಸಂಕಲನವಾಗಿ ಸಾಗರದ ಅಕ್ಷರ ಪ್ರಕಾಶನ ಸಂಸ್ಥೆಯವರು ಪ್ರಕಟಿಸಲು ಮುಂದೆ ಬಂದದ್ದು ಸಂತೋಷದ ವಿಷಯ ಎಂದಿದ್ದಾರೆ ಶಿವರಾಮ ಕಾರಂತರು.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books