ಆಧುನಿಕ ಅಮರಾವತಿ

Author : ಆರ್.ಸಿ. ಭೂಸನೂರಮಠ

₹ 60.00




Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020
Phone: 9448110034

Synopsys

ಲೇಖಕ ರಾಜಶೇಖರ ಭೂಸನೂರಮಠ ಅವರು ಬಾನುಲಿಗೆ ಬರೆದ ನಾಟಕಗಳ ಕೃತಿ-ಆಧುನಿಕ ಅಮರಾವತಿ. ಈ ಬಾನುಲಿ ನಾಟಕಗಳಲ್ಲಿ ಅಂತರಿಕ್ಷ ವಾಹನವೊಂದು ಮಾರ್ಗ ತಪ್ಪಿ ದೇವೇಂದ್ರನ ರಾಜಧಾನಿಯಲ್ಲಿಳಿದಾಗ ಮಾನವ ದೇವರುಗಳನ್ನು ಸಂದರ್ಶಿಸಿದ ಘಟನೆ, ಸಾಹಿತಿಯೊಬ್ಬನಿಗೆ  ವಿಜ್ಞಾನದ ಹುಚ್ಚು ಹಿಡಿದರೆ?, ಲಿಪ್ ಸ್ಟಿಕ್ ಕೂಡಾ ಮಾರಕಾಸ್ತ್ರವೆ!, ಕಾನೂನಿನೊಡನೆ ಕಣ್ಣಾ ಮುಚ್ಚಾಲೆ, ದೇಶದ ಕರೆ ವಿಜ್ಞಾನಿಗಳನ್ನು ಕೈ ಬೀಸಿ ಕರೆದಾಗ ಸ್ವಾರ್ಥ ಮತ್ತು ತ್ಯಾಗಗಳ ನಡುವಿನ ಒಂದು ಮನೋವೇದಕ ಸಂಘರ್ಷ ಇಂತಹ ವಿಷಯಗಳು ನಾಟಕಗಳ ವಸ್ತುಗಳಾಗಿವೆ. 

 

About the Author

ಆರ್.ಸಿ. ಭೂಸನೂರಮಠ
(09 December 1925 - 05 July 2006)

ಕವಿರುದ್ರ ಕಾವ್ಯ ನಾಮಾಂಕಿತ ಆರ್.ಸಿ. ಭೂಸನೂರಮಠ (ರಾಜಶೇಖರ ಭೂಸನೂರಮಠ) ಅವರು ಧಾರವಾಡ ಜಿಲ್ಲೆಯ ಕೌಜಲಗಿಯವರು. ಹುಟ್ಟಿದ್ದು 1925 ಡಿಸೆಂಬರ್ 9 ರಂದು. ತಾಯಿ ಚನ್ನವೀರಮ್ಮ, ತಂದೆ ಚನ್ನವೀರಯ್ಯ. ಕೌಜಲಗಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು. ಹಿಂದಿ ವಿಶಾರದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರು ರಾಣೆಬೆನ್ನೂರು ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಕರ್ನಾಟಕ ಕಾಲೇಜಿನಿಂದ ಪದವಿ ಪಡೆದ ನಂತರ ದೇಶದ ನಾನಾ ಭಾಗಗಳ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದರು.  ಪ್ರಮುಖ ಕೃತಿಗಳು: ಜೆಂಗೊಡ, ಕನಸಿನ ರಾಣಿ' (ಕವನಸಂಕಲನ), ಭಕ್ತಿ ಭಂಡಾರಿ ಮತ್ತು ಇತರ ನಾಟಕಗಳು (ನಾಟಕ) ಮುಂತಾದವು. ಕನ್ನಡ ...

READ MORE

Related Books