ದಿಗಂಬರ ಮಾಣಿಕ ಮುತ್ಯಾ ಕಲ್ಮೂಡ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 124

₹ 80.00




Year of Publication: 2015
Published by: ಸಿದ್ದಲಿಂಗೇಶ್ವರ ಪ್ರಕಾಶನ
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ

Synopsys

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರ ನಾಟಕ ಕೃತಿ-ದಿಗಂಬರ್ ಮಾಣಿಕ ಮುತ್ಯಾ ಕಲ್ಮೂಡ. ಇದು ಚಾರಿತ್ರಿಕ ನಾಟಕ. ಈ ಪ್ರದೇಶದ ಚಾರಿತ್ರಿಕ ಸತ್ಯ ಘಟನೆ ಕಟ್ಟಿಕೊಡುತ್ತಲೇ ಮಾಣಿಕ ಮುತ್ಯಾ ಅವರ ಜೀವನ ಸಾಧನೆ ಪರಿಚಯಿಸಲಾಗಿದೆ. ನಾಟಕ ವಸ್ತು ವೈವಿಧ್ಯತೆ ಯಿಂದ ಗಮನ ಸೆಳೆಯುತ್ತದೆ. ಹಾಸ್ಯ ಪಾತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ನಾಟಕದ ವಸ್ತು ಹೆಣೆದಿರುವುದು ಗಮನಾರ್ಹ. ಈ ನಾಟಕದ ಪಾತ್ರಗಳಾದ ಕಾಮದೇವ, ಸೋಮಪ್ಪ,ಮಾಣಿಕರಾಯ ಹೆಚ್ಚು ಅಪ್ಯಾಯಮಾನವಾಗಿ ಮೂಡಿಬಂದಿವೆ.ಆಧ್ಯಾತ್ಮಿಕ ಚಿಂತನೆ ಗ್ರಾಮೀಣ ಬದುಕಿನ ಚಿತ್ರಣ ಓದುಗರಿಗೆ ಖುಷಿ ನೀಡುತ್ತದೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books