ಬೆರಳ್ ಗೆ ಕೊರಳ್

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 64

₹ 60.00




Year of Publication: 2013
Published by: ಉದಯರವಿ ಪ್ರಕಾಶನ
Address: 1354/1 ಕೃಷ್ಣಮೂರ್ತಿಪುರಂ, ಮೈಸೂರು 570004
Phone: 0821 2332971

Synopsys

1947ರಲ್ಲಿ ಮೊದಲ ಮುದ್ರಣವನ್ನು ಕಂಡಂತಹ ನಾಟಕ ಬೆರಳ್‍ಗೆ ಕೊರಳ್. ಈ ನಾಟಕದಲ್ಲಿ ಗುರು, ಕರ್ಮ ಮತ್ತು ಯಜ್ಞ ಎಂಬ ಮೂರು ದೃಷ್ಯಗಳಿವೆ. ನಾಟಕದ ಎರಡನೇ ಮುದ್ರಣದಿಂದ ಕೊನೆಯಲ್ಲಿ ದೇ. ಜವರೇಗೌಡ ಅವರ ಟಿಪ್ಪಣಿಯನ್ನು ಕಾಣಬಹುದು. ಏಕಲವ್ಯನ ಕಥೆಯನ್ನು ಆಧಾರಿಸಿ ಬರೆದಂತಹ ನಾಟಕವಿದು. ಏಕಲವ್ಯ, ಅಬ್ಬೆ, ಅಶ್ವತ್ಥಾಮ ಹಾಗೂ ದ್ರೋಣಾಚಾರ್ಯರ ಪಾತ್ರಗಳನ್ನು ಹೊಂದಿರುವಂತಹ ಈ ನಾಟಕದ ನಿರೂಪಣೆಯು, ಮಹಾಭಾರತದಲ್ಲಿ ಕಾಣಲು ಸಿಗುವ ಏಕಲವ್ಯನ ಕಥಾನಕವನ್ನು ವಿವರಿಸುತ್ತದೆ. ಬಿಲ್ವಿದ್ಯೆಯಲ್ಲಿ ದ್ರೋಣಾಚಾರ್ಯರನ್ನು ಗುರುವಾಗಿ ಸ್ವೀಕರಿಸಿದ ಏಕಲವ್ಯ, ಶಬ್ದವೇದಿ ವಿದ್ಯೆಯಲ್ಲಿ ಕೂಡ ಪ್ರಾವೀಣ್ಯವನ್ನು ಪಡೆದ ಸಂದರ್ಭದಲ್ಲಿ ಗುರು ದಕ್ಷಿಣೆಯಾಗಿ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಕೇಳುವ ಕಥಾನಕವನ್ನು ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ. ಗುರುವಿಗಾಗಿ ಏನನ್ನು ಬೇಕಾದರೂ ನೀಡಲು ಸಿದ್ಧ ಎಂದು ಎದೆ ತಟ್ಟಿ ಹೇಳುವ ಏಕಲವ್ಯ ಓದುಗರ ಮನದಲ್ಲಿ ಶಾಶ್ವತವಾಗಿ ಮನೆ ಮಾಡಿ ನಿಲ್ಲುತ್ತಾನೆ. ಅತ್ಯಂತ ಭಾವುಕವಾಗಿ ಈ ನಾಟಕದಲ್ಲಿನ ದೃಶ್ಯಗಳು ಮೂಡಿ ಬಂದಿವೆ. ಓದುಗರಲ್ಲಿ ಕುತೂಹಲವನ್ನು ಉಂಟು ಮಾಡುವ ಜೊತೆಗೆ ಏಕಲವ್ಯನ ಗುರುನಿಷ್ಠೆ ಹಾಗೂ ಏಕಾಗ್ರತೆಯ ವರ್ಣನೆ ನೀಡುವ ನಾಟಕವಿದು.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books