ಒಂದು ಕಾನೂನಾತ್ಮಕ ಕೊಲೆ

Author : ಶಿವಕುಮಾರ್ ಮಾವಲಿ

Pages 88

₹ 100.00




Year of Publication: 2023
Published by: ಮಾವಲಿ ಪಬ್ಲಿಕೇಶನ್
Address: #3110,14ನೇ ಮುಖ್ಯ ರಸ್ತೆ, ಆರ್.ಪಿ.ಸಿ. ಲೇಔಟ್, ಅತ್ತಿಗುಪ್ಪೆ, ವಿಜಯನಗರ, ಬೆಂಗಳೂರು- 560040
Phone: 9164149495

Synopsys

‘ಒಂದು ಕಾನೂನಾತ್ಮಕ ಕೊಲೆ’ ಕೃತಿಯು ಶಿವಕುಮಾರ ಮಾವಲಿ ಅವರ ನಾಟಕ ಸಂಕಲನವಾಗಿದೆ. ನಾಟಕ ರೂಪದಲ್ಲಿ ಈಗಾಗಲೇ ಹಲವು ಪ್ರದರ್ಶನವನ್ನು ಕಂಡ ‘ಒಂದು ಕಾನೂನಾತ್ಮಕ ಕೊಲೆ’ ಈ ಕಾಲಕ್ಕೆ ಅಲ್ಲದೆ ಮುಂದಿನ ಅನೇಕ ಕಾಲಕ್ಕೆ ಸಲ್ಲಬಹುದಾದ ಸಂಕಲನ. ಸರ್ಕಾರ-ಮನುಷ್ಯರು, ಮನುಷ್ಯರು-ಮನುಷ್ಯರ ನಡುವಿನ ಸಂಬಂಧ ಮತ್ತು ಸಂಘರ್ಷಗಳನ್ನು ಒಳಗೊಂಡಿರುವ ಈ ನಾಟಕವನ್ನು ಅಭಿನಯಿಸುವುದರ ಜೊತೆಗೆ ಓದಲು ಕೂಡ ಬಹಳಷ್ಟು ಕುತೂಹಲಕಾರಿಯಾಗಿದೆ. ವಿಜ್ಞಾನ- ತಂತ್ರಜ್ಞಾನಗಳ ಬೆಳವಣಿಗೆ ಮನುಷ್ಯನಲ್ಲಿ ಅಭಿವೃದ್ಧಿಯ ಬಗ್ಗೆ ಜಾಗೃತ ಮನಸ್ಸನ್ನು ಉಂಟು ಮಾಡುತ್ತಿರುವುದು ಎಷ್ಟು ಸತ್ಯವೋ, ಮನುಷ್ಯ ತನ್ನಂತೆಯೇ ಇರುವ ಮನುಷ್ಯನ ಮೇಲೆ ದ್ವೇಷ, ಮತ್ಸರ ಸಾಧಿಸಲು ಸಜ್ಜಾಗುವುದೂ ಅಷ್ಟೇ ಸತ್ಯವಾಗಿದೆ. ತೀರ ಕ್ಷುಲ್ಲಕ ಎನಿಸುವ ಕಾರಣಗಳಿಗೂ ಹಿಂಸೆಯತ್ತ ಸಾಗುತ್ತಿರುವ ಸಮಯದಲ್ಲಿ ‘ಕೊಂದವರುಳಿದರೆ ಕೂಡಲಸಂಗಮದೇವಾ’ ಎಂಬ ಬಸವಣ್ಣನವರ ವಚನದ ಸಾಲನ್ನು ದ್ರವ್ಯವಾಗಿ ಹೊಂದಿರುವ ಈ ನಾಟಕ ಹೆಚ್ಚು ಜನರನ್ನು ತಲುಪಬಹುದು.

About the Author

ಶಿವಕುಮಾರ್ ಮಾವಲಿ

ಶಿವಕುಮಾರ್ ಮಾವಲಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿಯವರು. ಶಿವಮೊಗ್ಗದ ಡಿ.ವಿ.ಎಸ್. ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ.  ಸದ್ಯ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್  ಪ್ರತಿಭಾವಂತ ಬರಹಗಾರ. ಕಥೆ, ಕವಿತೆ, ನಾಟಕ ಹೀಗೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಿವಕುಮಾರ್ ಅವರ ಮೊದಲ ಕಥಾಸಂಕಲನ ‘ದೇವರು ಅರೆಸ್ಟ್ ಆದ’ ಅವರ ‘ಸುಪಾರಿ ಕೊಲೆ’ ನಾಟಕ ಸಿನಿಮವಾಗುತ್ತಿದೆ. ಅವರ ಇತ್ತೀಚಿನ ಪುಸ್ತಕ ಟೈಪಿಸ್ಟ್ ತಿರಸ್ಕರಿಸಿದ ಕಥೆ. ಈ ಕೃತಿಯನ್ನು ಬಹುರೂಪಿ ...

READ MORE

Related Books