ಅನ್ನಾವತಾರ

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 75

₹ 1.00




Year of Publication: 1954
Published by: ಮಿತ್ರವೃಂದ ಪ್ರಕಾಶನ
Address: ಕಾಸರಗೋಡು

Synopsys

ತ.ರಾ.ಸು (ತ.ರಾ.ಸುಬ್ಬಾರಾವ್ ) ಅವರು ಬರೆದ ರೇಡಿಯೋ ನಾಟಕಗಳ 2ನೇ ಭಾಗ ಕೃತಿ-ಅನ್ನಾವತಾರ. ಸಾಮಾನ್ಯವಾಗಿ ನಾಟಕಗಳಿಗೆ ಅಗತ್ಯವಾಗಿ ಬೇಕಾದ ರಂಗಮಂಟಪ, ದೀಪಾಲಂಕಾರ, ಸ್ಥಳ ಇತ್ಯಾದಿ ರೇಡಿಯೋ ಪ್ರಸಾರದ ನಾಟಕಗಳಿಗೆ ಬೇಕಾಗುವುದಿಲ್ಲ. ಉಪಕರಣಗಳೂ ಬೇಕಿಲ್ಲ. ಆದರೆ, ರೇಡಿಯೋ ನಾಟಕಗಳಲ್ಲಿ ಶಬ್ಧಸಿದ್ಧಿ ಬೇಕು. ಅದಿಲ್ಲದಿದ್ದರೆ ಉತ್ತಮ ರೇಡಿಯೋ ನಾಟಕ ಪ್ರಸಾರಕನಾಗುವುದಿಲ್ಲ. ಆದ್ದರಿಂದ, ರೇಡಿಯೋ ನಾಟಕಗಳನ್ನು ಬರೆಯುವುದು ಸ್ವಲ್ಪ ಕಷ್ಟದ ಕೆಲಸ. ಸ್ವಾತಂತ್ಯ್ರವೀರ, ಅನ್ನಾವತಾರ, ನರಕವಾದ ನಂದನ, ಕರವಸ್ತ್ರ ಹಾಗೂ ಗಂಗಾದೇವಿ-ಈ ಐದು ರೇಡಿಯೋ ನಾಟಕಗಳ ಸಂಕಲನವಿದು.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books