ಕಿತ್ತೂರಿನ ವೀರರಾಣಿ

Author : ಬಸವರಾಜ ನಾಯ್ಕರ

Pages 164

₹ 120.00




Year of Publication: 2011
Published by: ಗೀತಾಂಜಲಿ ಪ್ರಕಾಶನ
Address: # 134, 8ನೇ ಅಡ್ಡರಸ್ತೆ, ಗೋವಿಂದರಾಜ ನಗರ, ಬೆಂಗಳೂರು-560 040
Phone: 9740066842

Synopsys

ಡಾ. ಬಸವರಾಜ ನಾಯ್ಕರ ಅವರು ಬರೆದ ನಾಟಕ-ಕಿತ್ತೂರು ವೀರರಾಣಿ. ಕಿತ್ತೂರಿನ ಸಂಸ್ಥಾನ ಕುರಿತಂತೆ ತಮ್ಮ ಸುದೀರ್ಘವಾದ ಸಂಶೋಧನೆಗಳ ಮೂಲಕ ಕಂಡು ಕೊಂಡು ದಾಖಲೆಗಳು, ಆಡಳಿತ ವೈಖರಿ, ಜನಸಾಮಾನ್ಯರ ಅಭಿಮಾನದ ನುಡಿಗಳು ಹೀಗೆ ಸವಿಸ್ತಾರವಾದ ಮಾಹಿತಿಗಳನ್ನು ನಾಟಕದ ಶಿಸ್ತಿನ ಚೌಕಟ್ಟಿನಲ್ಲಿರಿಸಲಾಗಿದೆ. ಕಿತ್ತೂರು ಸಂಸ್ಥಾನ ಅಥವಾ ರಾಣಿ ಕುರಿತಂತೆ ಈವರೆಗೆ ಪ್ರದರ್ಶನ ಪಡೆದಿರುವ ನಾಟಕಗಳ ಪೈಕಿ ‘ಕಿತ್ತೂರು ವೀರರಾಣಿ’ ನಾಟಕವು ತೀರಾ ವಿಭಿನ್ನವಾಗಿದ್ದು, ಐತಿಹಾಸಿಕವಾಗಿ ಸಮರ್ಥನೀಯ ದಾಖಲೆಗಳನ್ನು ಆಧರಿಸಿ ಬರೆದ ಅತ್ಯಂತ ಶಿಸ್ತಿನ ದೃಶ್ಯ ರೂಪವಿದು ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books