ಮಂಟೇಸ್ವಾಮಿ ಕಥಾಪ್ರಸಂಗ

Author : ಎಚ್.ಎಸ್. ಶಿವಪ್ರಕಾಶ್

Pages 76

₹ 160.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

`ಮಂಟೇಸ್ವಾಮಿ ಕಥಾಪ್ರಸಂಗ’ ಕೃತಿಯು ಎಚ್.ಎಸ್. ಶಿವಪ್ರಕಾಶ್ ಅವರ ನಾಟಕ ಸಂಕಲನವಾಗಿದೆ. ಕನ್ನಡ ರಂಗಭೂಮಿ ಇತಿಹಾಸದಲ್ಲಿ ಮೈಲಿಗಲ್ಲು ಪಡೆದ ಕೃತಿ ಇದಾಗಿದೆ. ಬಡವರ, ಕೆಳಸ್ಥರದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಅವರ ಕಷ್ಟಗಳಲ್ಲಿ ಭಾಗಿಯಾಗುವ ಮಂಟೆಸ್ವಾಮಿಯವರ ಜೀವನವೇ ಒಂದು ಕಾವ್ಯವಾಗಿ, ಹಾಡಾಗಿ ನಮ್ಮಮುಂದೆ ನಿಂತಿದೆ. "ಏಳು ಒಂಟೆಯಮೇಲೆ ವೇದ ಪುರಾಣ ಏರಿಕೊಂಡು ದೇವಮಾನವರ್ನೆಲ್ಲಾ ಸೆರೆ ಇಡ್ಯಕ್ ಕಲಿ ಪುರೂಸ ಬತ್ತಾನೆ. ಅವಾಗ ನೀವು ಅವನ ವೇದ ಪುರಾಣಗಳ ಸುಟ್ಟು ಬೂದಿಮಾಡಿ ಆಣೇಗೆಅಚ್ಕಳ್ರಪ್ಪಾ. ಉಳಿಮುಟ್ಟದ್ಲಿಂಗ ಇಡ್ಕಂಡ್ ಐಕ್ಯವಾಗ್ರಪ್ಪ" ಎನ್ನುವ ಮಂಟೇಸ್ವಾಮಿಯ ಕೊನೆಯ ಮಾತು ಬ್ರಾಹ್ಮಣಶಾಹಿ, ಪುರೋಹಿತಶಾಹಿ ನೀತಿಯ ವಿರುದ್ಧ ಕೆಳಸ್ಥರದ ಜನರಿಗೆ ಮಂಟೇಸ್ವಾಮಿಯ ಆತ್ಮವಿಶ್ವಾಸವನ್ನು ತುಂಬುವ ಸರಿದಾರಿಯೆಡೆಗೆ ಕೊಂಡೊಯ್ಯುವ ಮಾತುಗಳಾಗಿವೆ. ಒಬ್ಬ ವ್ಯಕ್ತಿಕೇಂದ್ರಿತ ನಾಟಕವಾದರೂ ಸಹ ಆ ವ್ಯಕ್ತಿ ಇಡೀ ಸಮಾಜವನ್ನು ಬಿಂಬಿಸುವ ಸಮಾಜಮುಖಿಯಾಗಿರುವುದರಿಂದ ಈ ನಾಟಕದಿಂದ ಕಲಿಯುವುದು ತುಂಬಾನೇ ಇದೆ. ಮತ್ತು ಇಂತಹ ಇತಿಹಾಸವನ್ನು ನಮ್ಮ ಮುಂದೆ ಇಡುವಂತಹ ಅಪರೂಪದ ನಾಟಕಗಳನ್ನು ನಾವು ಓದಲೇಬೇಕು.

About the Author

ಎಚ್.ಎಸ್. ಶಿವಪ್ರಕಾಶ್
(15 June 1954)

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...

READ MORE

Related Books