ಧ್ಯಾನ ಭಾರತಿ

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 16

₹ 91.00




Published by: ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ
Address: ಮಲ್ಲಾಡಿಹಳ್ಳಿ- 577531

Synopsys

‘ಧ್ಯಾನ ಭಾರತಿ’ ತಿರುಕ ಅವರ ಏಕಪಾತ್ರಾಭಿನಯ ಕೃತಿಯಾಗಿದೆ. ಕೃತಿಯ ಸನ್ನಿವೇಶ ಹೀಗಿದೆ: ಭಾರತ ಮಾತೆಯು ಚಿಂತಾಕ್ರಂತಳಾಗಿ ಪರ್ವತಶ್ರೇಣಿಯ ಒಂದು ಹಾಸು ಬಂಡೆಯ ಮೇಲೆ ಕುಳಿತಿರುವಳು ; ಅವಳಿಗೆ ಹೊರಗಿನ ಪ್ರಪಂಚದ ಅರಿವೇ ಇದ್ದಂತಿಲ್ಲ. ಹರಿದು ಜೋಡಿಸಿದ ಬಟ್ಟೆ; ಅಲ್ಲಲ್ಲಿ ಛಿದ್ರವಾಗಿದೆ. ತಲೆಯ ಮೇಲೆ ಕಿರೀಟವಿದ್ದರೂ ಭಿನ್ನ ವಾದಂತಿದೆ..ಸ್ವಲ್ಪ ಹೊತ್ತು ಮನ....ಸ್ಮಶಾನಮಾನ, ಆಗ ಸುತ್ತಲಿಂದ ಈ ಮೌನವನ್ನು ಭೇದಿಸಿ ವಂದೇಮಾತರಂ ಗೀತೆಯೂ ಜತೆಯಲ್ಲೇ ಪ್ರಚಂಡ ಜಯಘೋಷವೂ ಕೇಳಿಬರುತ್ತದೆ. ವಂದೇಮಾತರಂ. ಭಾರತಮಾತಾಕೀ ಜೈ.... ಹಿಂದ್ ಮಾತಾಕೀ ಜೈ.... ಜೈ ಹಿಂದ್.... ಜೈ ಭಾರತ !....

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books