ಗಿರಿಜಾ ಕಲ್ಯಾಣ

Author : ಬಿ. ಸುರೇಶ

Pages 100

₹ 50.00




Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು
Phone: 9448804905

Synopsys

‘ಗಿರಿಜಾ ಕಲ್ಯಾಣ’ ಕೃತಿಯು ಬಿ. ಸುರೇಶ್ ಅವರ ನಾಟಕ ಸಂಕಲನವಾಗಿದೆ. ಈ ಕೃತಿಯೊಂದು ಕೆಲವೊಂದು ವಿಚಾರಗಳನ್ನು ಹೀಗೆ ಕಟ್ಟಿಕೊಟ್ಟಿದೆ : ಒಂದು ಆಧುನಿಕ ಪುರಾಣ ಎಂಬ ಉಪಶೀರ್ಷಿಕೆಯೊಂದಿಗೆ ಹೊರಬಂದಿರುವ ಈ ನಾಟಕದ ಹೆಸರು `ಗಿರಿಜಾ ಕಲ್ಯಾಣ‘. ಅತ್ಯಂತ ಸಮಕಾಲೀನ ವಸ್ತುವನ್ನು ಜನಪದ ಕೌದಿಯಲ್ಲಿ ಅಲಂಕರಿಸಿ ಮುಂದಿಟ್ಟಿದ್ದಾರೆ ಲೇಖಕ ಸುರೇಶ್. ರೈತನ ಆತ್ಮಹತ್ಯೆಯನ್ನು ರೈತರ ಮಡದಿಯ ಕಣ್ಣಿಂದ ನೋಡುವ ವಿಶಿಷ್ಟ ನಾಟಕ `ಗಿರಿಜಾ ಕಲ್ಯಾಣ‘. ಬಿ. ಜಯಶ್ರೀ ತಂಡ ಇದನ್ನು ಈಗಾಗಲೇ ರಂಗಕ್ಕೆ ತಂದಿದೆ. ಮರಾಠಿ ಮತ್ತು ಹಿಂದಿಗೆ ಅನುವಾದವಾಗಿದೆ. ಇಲ್ಲಿ ಕವನ ರೂಪದಲ್ಲಿಯೂ ಕೆಲವೊಂದು ತುಣುಕುಗಳನ್ನು ಲೇಖಕ ಹೀಗೆ ಬಣ್ಣಿಸಿದ್ದಾರೆ : ಇದು ಜೀವದ ಜಾತ್ರೆ ಇದು ಮುಗಿಯದ ಯಾತ್ರೆ ಕನಸಿನಂಗಳ ಸೇರಿ ತೇಲೋಣ ಬೆಳದಿಂಗಳ ಬೋನ ತಿನ್ನೋಣ ಹೊಸ ಕನಸಿನ ಕತೆಯ ಹೇಳೋಣ ಕಣ್ಣಗಲದ ಆಗಸವ ಬರೆಯೋಣ ಎಂದು ಬರೆಯುತ್ತಾ ಸುರೇಶ್ ಕವಿಯೂ ಆಗುತ್ತಾರೆ.

About the Author

ಬಿ. ಸುರೇಶ

ರಂಗಭೂಮಿ ಕಲಾವಿದ, ನಾಟಕಕಾರ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಬಿ. ಸುರೇಶ, 1962ರಲ್ಲಿ ದಾವಣಗೆರೆಯಲ್ಲಿ ಜನಿಸಿದರು. ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ವಿಜಯಾ ಅವರ ಪುತ್ರ. ಬಿ.ಸುರೇಶ ಅವರು 1973ರಿಂದಲೇ ಬಾಲನಟರಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕಾಣಿಸಿಕೊಂಡು ಈವರೆಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಅಲ್ಲದೇ, 1976 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ದ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಿತ್ರರಂಗದ ಬದುಕು ಪ್ರಾರಂಭವಾಯಿತು. 1988 ರಲ್ಲಿ ಮಿಥಿಲೆಯ ಸೀತೆಯರು ನಿರ್ದೇಶನ ಮಾಡಿದ ಅವರು ಚಿತ್ರಕಥೆ, ಸಂಭಾಷಣೆ ಬರೆಯುತ್ತಾ 15 ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ.  ’ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ 2002-2003 ...

READ MORE

Related Books