ಬೇಂದ್ರೆ ಕಾವ್ಯದ ದೇಸಿಯತೆ

Author : ಪ್ರಕಾಶ ಗ. ಖಾಡೆ

Pages 68

₹ 80.00




Year of Publication: 2020
Published by: ಯಾಜಿ ಪ್ರಕಾಶನ
Address: ಭೂಮಿ, ಎಂ.ಪಿ.ಪ್ರಕಾಶ ನಗರ, ನಾಹಾರ ಕಾಲೊನಿ, ಹೊಸಪೇಟೆ ಜಿಲ್ಲೆ ಬಳ್ಳಾರಿ.

Synopsys

ಲೇಖಕ ಡಾ. ಪ್ರಕಾಶ ಗ. ಖಾಡೆ ಅವರು ಬರೆದ ಕೃತಿ-ಬೇಂದ್ರೆ ಕಾವ್ಯದ ದೇಶಿಯತೆ’. ಬೇಂದ್ರೆ ಕಾವ್ಯಗಳು ದೇಸಿಯತೆ ಅಥವಾ ಸ್ಥಳೀಯತೆಯನ್ನು ಪ್ರತಿನಿಧಿಸುವ ಉತ್ತಮ ಮಾದರಿಗಳು. ಕಥೆಗಾರ ಡಾ. ಬಸು ಬೇವಿನಗಿಡದ ಕೃತಿಗೆ ಬೆನ್ನುಡಿ ಬರೆದು ‘ಕಾವ್ಯಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಯನ್ನು ಅನೇಕ ಮೂಲಗಳಿಂದ ಪಡೆದವರು. ಅನೇಕ ಭಾಷೆಗಳನ್ನು ಬಿಟ್ಟೂಬಿಡದೇ ಓದಿದರು. ಬೇಂದ್ರೆ ಅವರು ಅನೇಕ ದೇಶಗಳ ಕಾವ್ಯಗಳನ್ನು ಒದಿ ಅರಗಿಸಿಕೊಂಡವರು. ಅಷ್ಟೆಲ್ಲಾ ಹೊರಗಿನ ಪ್ರಭಾವವಿದ್ದರೂ ಬೇಂದ್ರೆ ಅವರು ಕನಕ, ಕುಮಾರವ್ಯಾಸ, ಶರೀಫ, ಸರ್ವಜ್ಞ ಮುಂತಾದ ಕವಿಗಳಿಂದ ಪ್ರೇರಿತವಾದ ದೇಸಿಯತೆಯನ್ನು ಮುರಿದು ಕಟ್ಟಿದರು. ಕನ್ನಡ ಜಾನಪದದ ಸೊಗಡು-ಸ್ವಾರಸ್ಯಗಳನ್ನು ವಿಫುಲವಾಗಿ ಬಳಸಿಕೊಂಡರು. ದೇಸಿಯತೆ ಹೇಗೆ ಬೇಂದ್ರೆ ಕಾವ್ಯದ ಮುಖ್ಯ ಗುಣವಾಗಿದೆ ಎಂಬುದನ್ನು ಪ್ರಕಾಶ ಗ. ಖಾಡೆ ಅವರ ಈ ಕೃತಿ ಅರ್ಥಪೂರ್ಣವಾಗಿ ಚರ್ಚಿಸುತ್ತದೆ. ಬೇಂದ್ರೆ ಅವರು ತರುಣರಾಗಿದ್ದಾಗ ಹೇಗೆ ಅವರು ಮರಾಠಿ ಸೇರಿದಂತೆ ಅನೇಕ ಭಾಷೆಗಳ ಕಾವ್ಯದಿಂದ ಪ್ರೇರಣೆಗೊಂಡರು ಎಂಬುದನ್ನು ತಿಳಿಸುವುದಲ್ಲದೇ ಅದರ ಕಾವ್ಯದೊಳಗಿನ ಜನಪದದ ಲಯ-ವಿಸ್ತಾರಗಳನ್ನು ಈ ಕೃತಿಯು ಮುನ್ನೆಲೆಗೆ ತರುತ್ತದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಪ್ರಕಾಶ ಗ. ಖಾಡೆ
(10 June 1965)

ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...

READ MORE

Related Books