ಇಮ್ಮಾವು

Author : ಶಿವರಾಮಯ್ಯ

Pages 120

₹ 100.00




Year of Publication: 2003
Published by: ಪುಸಕ ಪ್ರಪಂಚ
Address: ನಂ. 661/ಎ, 4ನೇ ಮುಖ್ಯರಸ್ತೆ, ಪೈಪ್‌ಲೈನ್‌, ಶ್ರೀನಗರ, ಬೆಂಗಳೂರು

Synopsys

‘ಇಮ್ಮಾವು ’ಶಿವರಾಮಯ್ಯ ಅವರ ವಿಮರ್ಶಾ ಲೇಖನಗಳಾಗಿವೆ. ಒಂದು ಯುದ್ಧ ಪ್ರಧಾನ - ಇನ್ನೊಂದು ಶಾಂತಿ ಪ್ರಧಾನ ಕಾವ್ಯಗಳಾದ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣಗಳ ಒಟ್ಟು ಸಾಹಿತ್ಯದ ಮೇಲೆ ಪ್ರೊ. ಶಿವರಾಮಯ್ಯನವರ ವಿಮರ್ಶಾತ್ಮಕ ಬರಹಗಳು. ಇನ್ನೂ ಮುಂದುವರೆದು ಕುಮಾರವ್ಯಾಸ - ದೇವಚಂದ್ರ ಮಾತ್ರವಲ್ಲದೆ ಇತ್ತೀಚಿನ ಕವಿ ಸಾಹಿತಿ ಕುವೆಂಪು ಸಾಹಿತ್ಯದವರೆಗೂ ಬಹು ಅಮೂಲ್ಯ ವಿಚಾರ ಪ್ರಚೋದಕ ಪ್ರೌಢ ಬರಹಗಳು.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Reviews

ಹೊಸತು-2004- ಜುಲೈ

ಒಂದು ಯುದ್ಧ ಪ್ರಧಾನ - ಇನ್ನೊಂದು ಶಾಂತಿ ಪ್ರಧಾನ ಕಾವ್ಯ ಗಳಾದ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣ ಗಳ ಒಟ್ಟು ಸಾಹಿತ್ಯದ ಮೇಲೆ ಪ್ರೊ|| ಶಿವರಾಮಯ್ಯನವರ ವಿಮರ್ಶಾತ್ಮಕ ಬರಹಗಳು. ಇನ್ನೂ ಮುಂದುವರೆದು ಕುಮಾರವ್ಯಾಸ - ದೇವಚಂದ್ರ ಮಾತ್ರವಲ್ಲದೆ ಇತ್ತೀಚಿನ ಕವಿ ಸಾಹಿತಿ ಕುವೆಂಪು ಸಾಹಿತ್ಯದವರೆಗೂ ಬಹು ಅಮೂಲ್ಯ ವಿಚಾರ ಪ್ರಚೋದಕ ಪ್ರೌಢ ಬರಹಗಳು. ಇಲ್ಲಿ ಅತ್ಯಂತ ಸೊಗಸಾದ ಭಾಷಾಶೈಲಿ ಇದ್ದು ಈ ನಾಲ್ಕು ಕವಿಗಳ ಸಾಹಿತ್ಯದ ದೃಷ್ಟಿ ಗುರಿ ಅಂದಿನ ಸಮಾಜದಲ್ಲಿ ಯಾವ ಕಡೆಗಿತ್ತೆಂದು ಬೆನ್ನುಹತ್ತಿ ಸ್ಪಷ್ಟವಾಗಿ ಗುರುತಿಸಿದ್ದಾರೆ.

Related Books