ಬಿಸಿಲ ಬೀದಿಯ ಪಯಣ

Author : ವೆಂಕಟೇಶ್ವರ ಕೆ. ಕೊಲ್ಲಿ

Pages 112

₹ 120.00




Year of Publication: 2021
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾಂವ್, ಕಮಲಾಪುರ ತಾಲೂಕು, ಕಲಬುರಗಿ ಜಿಲ್ಲೆ

Synopsys

ಲೇಖಕ ಡಾ.ವೆಂಕಟೇಶ್ವರ ಕೆ. ಕೊಲ್ಲಿ ಅವರ ವಿಮರ್ಶಾ ಲೇಖನಗಳ ಸಂಗ್ರಹ ಕೃತಿ- ಬಿಸಿಲ ಬೀದಿಯ ಪಯಣ. ವೈಶಿಷ್ಟ್ಯಪೂರ್ಣವಾದ 15 ಬರಹಗಳಿವೆ. ದಲಿತ ಬಂಡಾಯ ಸಾಹಿತ್ಯದ ಕಾವ್ಯ, ಕತೆ-ಕಾದಂಬರಿಗಳನ್ನು ಚರ್ಚಿಸಿದ್ದಾರೆ. ಸಾಹಿತಿಗಳಾದ ಬಸವರಾಜ ಸಬರದ, ಎಚ್. ಟಿ ಪೋತೆ, ಗೀತಾ ನಾಗಭೂಷಣ, ಘಾಳೆಪ್ಪಾ ಪೂಜಾರಿ,ಕೆ ನೀಲಾ, ಬಸವರಾಜ ಕಲೆಗಾರ, ಪಿ. ಲಂಕೇಶ, ಬಸವರಾಜ ಕಟ್ಟಿಮನಿ, ಡಾ.ಅಂಬೇಡ್ಕರ ಅವರ ಬರಹಗಳು ಹಾಗೂ ಸಾಹಿತ್ಯ ಪ್ರಭಾವ ಹೀಗೆ ವಸ್ತು ವೈವಿಧ್ಯತೆ ಇದೆ.

About the Author

ವೆಂಕಟೇಶ್ವರ ಕೆ. ಕೊಲ್ಲಿ
(31 July 1986)

ಡಾ. ವೆಂಕಟೇಶ್ವರ ಕೆ ಕೊಲ್ಲಿ ಅವರು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗಂಗಾರಾವಲಪಲ್ಲಿಯವರು. (ಜನನ: 31ನೇ ಜುಲೈ 1986)  ತಾಯಿ ಹುಲಿಗೆಮ್ಮ, ತಂದೆ ಕಾಶಪ್ಪ. ಪ್ರಾಥಮಿಕ ವಿದ್ಯಾಭ್ಯಾಸ ಸ್ವಂತ ಊರಲ್ಲಿ ಮುಗಿಸಿ ಪ್ರೌಢ ಶಿಕ್ಷಣ ಪಕ್ಕದ ಕಾನಾಗಡ್ಡದಲ್ಲಿ ಪೂರೈಸಿ, ಪದವಿ ಶಿಕ್ಷಣವನ್ನು ಗುರುಮಠಕಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರೈಸಿದರು. ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರರು. ‘ದಲಿತ ಚಳವಳಿ ಮತ್ತು ಸಾಹಿತ್ಯಕ್ಕೆ ದಲಿತೇತರರ ಕೊಡುಗೆ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ .ಯಿಂದ ಪಿ.ಎಚ್. ಡಿ ಪಡೆದಿದ್ದಾರೆ.  ಕೃತಿಗಳು: ನೆಲ ಮೂಲ ಚಿಂತನೆ (ವಿಮರ್ಶಾ ಲೇಖನಗಳು), ಬಿಸಿಲ ಬೀದಿಯ ಪಯಣ,  ಚಿಂತನೆಯ ...

READ MORE

Related Books