ಅರಿವಿನ ಕನ್ನಡಿ

Author : ನರಸಿಂಹಮೂರ್ತಿ ಹೂವಿನಹಳ್ಳಿ

Pages 158

₹ 170.00

Buy Now


Year of Publication: 2017
Published by: ಪ್ರೇರಣಾ ಪ್ರಕಾಶನ

Synopsys

ಅರಿವಿನ ಕನ್ನಡಿ ನರಸಿಂಹ ಮೂರ್ತಿ ಹೂವಿನಹಳ್ಳಿ ಅವರ ವಿಮರ್ಶಾ ಸಂಕಲನ. ಈ ಕೃತಿಯಲ್ಲಿ ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳ ಸಾಹಿತ್ಯ ಕೃತಿಗಳನ್ನು ವಿಮರ್ಶೆಗೆ ಒಳಪಡಿಸಲು ಯತ್ನಿಸಿದ್ದಾರೆ. ಕುಮಾರವ್ಯಾಸನಿಂದ ಹಿಡಿದು ಕಾರ್ನಾಡ್ ವರೆಗೆ ಪ್ರಮುಖ ಲೇಖಕರ ಜೊತೆಗೇ ವಚನಯುಗವನ್ನು ಕೂಡ ಈ ಕಾಲದ ವಿಮರ್ಶಾ ನೋಟಗಳ ಮೂಲಕ ಮರು ಓದಿಗೆ ಒಳಪಡಿಸಿದ್ದಾರೆ. ಕುವೆಂಪು ಕೃತಿಗಳ ಮರು ಓದಿನ ಮೂಲಕ, ಕುವೆಂಪು ಖಂಡರಿಸುವ ಬೇರೆ ಬೇರೆ ಪಾತ್ರಗಳನ್ನು ವರ್ತಮಾನದ ರಾಜಕೀಯಕ್ಕೆ ತಳಕು ಹಾಕುತ್ತಾರೆ. ಶೋಷಿತ ಸಮುದಾಯದಿಂದ ಬಂದ ಪುರಾಣ ಪಾತ್ರಗಳನ್ನು ಮುಂದಿಟ್ಟುಕೊಂಡು, ವರ್ತಮಾನದ ಜಾತಿ ಮತ್ತು ವರ್ಗ ಸಂಘರ್ಷಗಳ ನೆಲೆಗಳನ್ನು ಶೋಧಿಸಿದ್ದಾರೆ. ಕುವೆಂಪು ಅವರ ಮಹಾಕಾದಂಬರಿಯಲ್ಲಿ ಒಂದಾದ 'ಮಲೆಗಳಲ್ಲಿ ಮದುಮಗಳು' ಕೃತಿಯನ್ನು ಅವಲೋಕಿಸುತ್ತಾ, ಅಂದಿನ ಜನರ ಬದುಕು, ನಡತೆ, ಮಕ್ಕಳ ಆಟಪಾಠಗಳು, ಪುರೋಹಿತಶಾಹಿ ಹಿಡಿತ, ಗೂಂಡಾಗಿರಿಯ ಹಿಂಸೆ, ಶೂದ್ರರ ಬದುಕಿನ ಕಷ್ಟಗಳು, ನೋವುಗಳು, ಜೀತಪದ್ದತಿ, ಸಾರಿಗೆ ಸಂಪರ್ಕ, ಸ್ತ್ರೀಯರ ಬದುಕಿನ ವಿವರಗಳು, ಭೂಮಾಲಕರ ಕ್ರೌರ್ಯಗಳನ್ನು ಅಧ್ಯಯನ ಮಾಡಿ ಚರ್ಚೆಗೆ ಒಳಪಡಿಸಿದಾಗ ಅಂದಿಗೂ ಇಂದಿಗೂ ಬದಲಾವಣೆ ಆಗಿರುವ, ಆಗದಿರುವ ಅಂಶಗಳನ್ನು ಅವರು ಚರ್ಚಿಸತ್ತಾರೆ. ಕುಮಾರವ್ಯಾಸ ಭಾರತವನ್ನು ಅವಲೋಕಿಸುತ್ತಾ ಅದರೊಳಗಿರುವ ಸಮಕಾಲೀನ ರಾಜಕೀಯ ಸಂದೇಶಗಳನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಬೇಂದ್ರೆ ಮತ್ತು ಕುಮಾರವ್ಯಾಸನನ್ನು ಜೊತೆಗಿಟ್ಟು ನೋಡುವ ಪ್ರಯತ್ನವನ್ನೂ ಮಾಡುತ್ತಾರೆ. ಚಂದ್ರಶೇಖರ ಕಂಬಾರರ 'ಕರಿಮಾಯಿ' ಕೃತಿಯಲ್ಲಿ ಆಧುನಿಕ ಮತ್ತು ಸಂಪ್ರದಾಯದ ಸಂಘರ್ಷವನ್ನು ಕಟ್ಟಿಕೊಡುತ್ತಾರೆ. ಜಾಗತೀಕರಣ ಘಟ್ಟದ ಭಾರತವನ್ನು ತೇಜಸ್ವಿ ಅವರ 'ಜುಗಾರಿ ಕ್ರಾಸ್' ಕೃತಿಯಲ್ಲಿ ಅವಲೋಕಿಸುತ್ತಾರೆ. ಬೇಂದ್ರೆಯವರ ಶ್ರಾವಣ ಕವಿತೆಯಲ್ಲಿ ಹೊಸ ಹೊಳಹುಗಳನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಗಿರೀಶ್ ಕಾರ್ನಾಡ್‌ರ 'ತುಘಲಕ್' ಮೂಲಕ ಚರಿತ್ರೆಯ ಹೊಸ ಗ್ರಹಿಕೆಗಳನ್ನು ಗುರುತಿಸುತ್ತಾರೆ. ವಚನ ಲೋಕದೊಳಗೆ ಪ್ರವೇಶಿಸುತ್ತಾ ಅದರೊಳಗಿಂದ ಸಿಡಿದ ಪರ್ಯಾಯ ಸಂಸ್ಕೃತ ಮತ್ತು ಸಾಮಾಜಿಕ ಚಳವಳಿಯ ಹಂತಗಳನ್ನು ವಿವರಿಸುವ ಪ್ರಯತ್ನ ಮಾಡುತ್ತಾರೆ. ಇಂತಹ ಒಟ್ಟು 14 ವಿಮರ್ಶಾ ಬರಹಗಳು ಈ ಕೃತಿಯಲ್ಲಿದೆ.

About the Author

ನರಸಿಂಹಮೂರ್ತಿ ಹೂವಿನಹಳ್ಳಿ

ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿಯಲ್ಲಿ. ಕನ್ನಡದಲ್ಲಿ ಎಂ.ಎ ಪದವಿ ಪಡೆದು, ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ ಎಂಬ ವಿಷಯದಲ್ಲಿ ಮಹಾ ಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ವರಕವಿ ಬೇಂದ್ರೆ ಕಾವ್ಯಗಳ ಅಧ್ಯಯನ(ಲೇಖನಗಳು), ಮೌನದ ಸೆರಗು(ಕವಿತೆಗಳು), ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ(ತೌಲನಿಕ ಅಧ್ಯಯನ), ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ (ವಿಮರ್ಶಾ ಲೇಖನಗಳು), ದೇವರ ಜಾತ್ರೆ(ಕಾದಂಬರಿ), ಅರಿವಿನ ಕನ್ನಡಿ(ವಿಮರ್ಶಾ ಸಂಕಲನ), ...

READ MORE

Related Books