ಕಾವ್ಯುತ್ಯೋಗಂ

Author : ಬಸವರಾಜ ಕೋಡಗುಂಟಿ

Pages 134

₹ 120.00




Year of Publication: 2023
Published by: ಬಂಡಾರ ಪ್ರಕಾಶನ
Address: ಮಸ್ಕಿ, ರಾಯಚೂರು ಜಿಲ್ಲೆ -584124

Synopsys

‘ಕಾವ್ಯುತ್ಯೋಗಂ’ ಲೇಖಕ ಬಸವರಾಜ ಕೋಡಗುಂಟಿ ಕೃತಿ. ಈ ಪುಸ್ತಕವು ಕವನದ ತಾತ್ವಿಕತೆಯನ್ನು ಹಿಡಿದು ಕವನವನ್ನು ಓದುವ ಪ್ರಯತ್ನ ಎಂದೂ ಅರ್ಥ ಮಾಡಿಕೊಳ್ಳುವ ಸಾದ್ಯತೆ ಇದೆ. ಬೇಂದ್ರೆ ಭಾಷೆಯನ್ನು ಹಿಡಿಯುವುದಕ್ಕೆ ದಾರಿ ಹುಡುಕುವ ಪ್ರಯತ್ನವೆ ಆಗಿದೆ. ಹಲವು ದಾರಿಗಳನ್ನ ಪ್ರಯತ್ನಿಸಿದ ಬಳಿಕ ಬೇಂದ್ರೆ ಭಾಷೆಯನ್ನು ಹಿಡಿಯಲು ಸಾಧ್ಯವಾಗಬಹುದು. ಅಲ್ಲಿಯವರೆಗೆ ಮಾತುಗಳು ಬಸವಳಿಯುವುದಿಲ್ಲ. ಈ ಉದ್ಯೋಗವೊಂದು ಕನ್ನಡದಲ್ಲಿ ಹೊಸತೆನಿಸುವಂತಿದೆ. ಹೀಗೆ ಬಾಷೆಯನ್ನು ಇಷ್ಟು ಹಿಡಿದು ಓದುವ ಕ್ರಮಗಳು ಬಂದ ಹಾಗಿಲ್ಲ ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಕೃತಿಯಲ್ಲಿ ‘ನಾಳೆಯಾಚೆಗಿನ ನಾಡದಿನ ನಾಡು’, ‘ಬಾಶೆಯ ಸಂಕೀರ್ಣ ರಚನೆ ಮತ್ತು ಸಾಹಿತ್ಯದ ಓದು’, ‘ಬೇಂದ್ರೆ ಕಾವ್ಯದ ಬಾಶಿಕ ಓದು’, ‘ಗುಂಗು ಹಿಡಿದು ತಂಗಿದಾಗ ತುಂಬಿ ಬಂದಿತ್ತಾ’, ‘ಆಡಲು ಹಾಡಲು ತಾ ಹಾರಾಡಲು’, ‘ಹಕ್ಕಿ ಹಾರುತಿದೆ ನೋಡಿದಿರಾ’, ‘ನೆಲಕೆ ಹರೆಯವು ಮರಳಿದೆ’, ‘ಬಾರೊ ಸಾದನಕೇರಿಗೆ’, ‘ಹಿಗ್ಗಿನ ಹಾಡು’, ‘ಗುರುದೇವ’ ವಿಷಯಗಳು ಸಂಕಲನಗೊಂಡಿವೆ.

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books