ಬೇಂದ್ರೆಯವರ ಕಾವ್ಯ ಶೈಲಿ

Author : ಕೆ.ವಿ. ತಿರುಮಲೇಶ್‌

Pages 1




Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕೆ.ವಿ. ತಿರುಮಲೇಶ್ ಅವರು  ಕನ್ನಡ ಸಾಹಿತ್ಯಕ್ಷೇತ್ರದ ಪ್ರಮುಖ ಅನ್ವೇಷಕರಲ್ಲಿ ಒಬ್ಬರು. ಕವಿತೆ, ಕಥೆ, ಕಾದಂಬರಿಗಳಂತಹ ಸೃಜನಶೀಲ ಪ್ರಕಾರಗಳಿರಲಿ, ಸಾಹಿತ್ಯತತ್ಯ, ವಿಮರ್ಶೆಗಳಂತಹ ಚಿಂತನ ವಲಯಗಳಿರಲಿ, ಅವರು ಯಾವಾಗಲೂ ಹೊಸ ಸಾಧ್ಯತೆಗಳನ್ನು ಹುಡುಕುತ್ತಿರುತ್ತಾರೆ. ಅಭಿವ್ಯಕ್ತಿ ಮತ್ತು ಆಶಯಗಳ ಅನನ್ಯತೆಯನ್ನು ಸಾಧಿಸಲು  ಅವರು ನಡೆಸಿರುವ ಪ್ರಯತ್ನಗಳು ಕನ್ನಡ ಕಾವ್ಯದ ಮಹತ್ವದ ದಾಖಲೆಗಳಾಗಿವೆ.  

ತಿರುಮಲೇಶ್  ಪರಿಶೀಲನೆಗೆ ಆರಿಸಿಕೊಂಡಿರುವ ಕವಿಯಾದರೋ ತಮ್ಮ ಅಗಾಧ ಪ್ರತಿಭೆಯಿಂದ ಎಂತಹ ವಿಮರ್ಶಕನಿಗೂ ಸವಾಲಾಗಬಲ್ಲವರು. ಪರಸ್ಪರ ವಿಭಿನ್ನವಾದ ಶೈಲಿಗಳನ್ನು ಏಕಕಾಲದಲ್ಲಿ ಮತ್ತು ತಮ್ಮ ಕಾವ್ಯ ಜೀವನದ ವಿಭಿನ್ನ ಹಂತಗಳಲ್ಲಿ ಬಳಸಿರುವ ವರಕವಿ ದ.ರಾ. ಬೇಂದ್ರೆಯವರ ಕಾವ್ಯಶೈಲಿಯು ಪಾಂಡಿತ್ಯಪೂರ್ಣವಾದ ಒಳನೋಟಗಳನ್ನು ಲೇಖಕರು ’ಬೇಂದ್ರೆ ಕಾವ್ಯ ಶೈಲಿ’ ಕೃತಿ  ಪರಿಚಯಿಸುತ್ತದೆ. ತಿರುಮಲೇಶ್ ಅವರ ಈ ಕೃತಿಯು ಅಂತಹ ಚರ್ಚೆ, ಹೊಸ ದಿಕ್ಕು ಮತ್ತು ಆಯಾಮಗಳನ್ನು ದೊರಕಿಸಿಕೊಡುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದೇ ಹೇಳಬಹುದು. ಬೇಂದ್ರೆ ಕಾವ್ಯದ ಅಧ್ಯಯನದಲ್ಲಿ ತೊಡಗುವವರಿಗೆ ಈ ಕೃತಿ ಉತ್ತಮ ಕೃಪಿಡಿಯೂ ಆಗಬಲ್ಲದು. 

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Related Books