ಭಾರತೀಯ ಕಾವ್ಯ ಮೀಮಾಂಸೆ: ತತ್ವ ಮತ್ತು ಪ್ರಯೋಗ

Author : ಕೆ.ಕೃಷ್ಣಮೂರ್ತಿ

Pages 67

₹ 2.00




Year of Publication: 1971
Published by: ಕೆ.ಸಿ.ಶಿವಪ್ಪ
Address: ಸಂಚಾಲಕರು, ಪ್ರಕಟಣೆ ಮತ್ತು ಪ್ರಚಾರೋಪನ್ಯಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

Synopsys

ಭಾರತೀಯ ಕಾವ್ಯ ಮೀಮಾಂಸೆಯ ತತ್ವ ಹಾಗೂ ಪ್ರಯೋಗಗಳ ಕುರಿತು ಜಿಜ್ಞಾಸೆ ನಡೆಸಿದ ಕೃತಿ ಇದು. ಡಾ. ಕೆ. ಕೃಷ್ಣಮೂರ್ತಿ ರಚಿಸಿದ್ದಾರೆ. ಅಲಂಕಾರ, ಗುಣ, ರೀತಿ ಇವು ಕಾವ್ಯಾಂಗದ ಬಾಹ್ಯ ಲಕ್ಷಣಗಳು. ರಸ, ಧ್ವನಿ ಹಾಗೂ ತತ್ವಗಳು ಕಾವ್ಯದ ಅಂತರಂಗದ ಲಕ್ಷಣಗಳು. ಇವೆರಡರ ಪರಸ್ಪರ ಸಮನ್ವಯ ಅಗತ್ಯ. ಲೋಕಾನುಭವಕ್ಕಿಂತ ಕಾವ್ಯಾನುಭವ ಮುಖ್ಯ ಎಂದು ಸೌಂದರ್ಯಶಾಸ್ತ್ರ ತಿಳಿಸುತ್ತದೆ. ಆದರೆ, ಕಾವ್ಯ ಮೀಮಾಂಸೆಯಲ್ಲಿ ಗುಣ-ದೋಷಗಳ ಚರ್ಚೆ ನಡೆದು, ಸಾಹಿತ್ಯದ ನೈತಿಕ ಬೆಲೆಯೂ ಮುಖ್ಯವಾಗುತ್ತದೆ. ಹೀಗಾಗಿ, ನೈತಿಕ ದೃಷ್ಟಿಗೂ ಸೌಂದರ್ಯ ದೃಷ್ಟಿಗೂ ಘರ್ಷಣೆಯಾಗುತ್ತಲೇ ಇರುತ್ತದೆ. ಸಂಗೀತ, ಶಿಲ್ಪ, ಚಿತ್ರಕ್ಕೆ ಅನ್ವಯವಾಗುವ ಸೌಂದರ್ಯ ತತ್ವವು ಕಾವ್ಯ ಮೀಮಾಂಸೆಯ ಶಾಸ್ತ್ರಕ್ಕೂ ಅನ್ವಯಿಸುತ್ತದೆ. ಹೀಗೆ ಜಿಜ್ಞಾಸೆಯನ್ನು ಒಳಗೊಂಡ ಕೃತಿ ಇದು.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books