ಕಾಲು ದಾರಿ

Author : ನಾಗಭೂಷಣ ಬಗ್ಗನಡು

Pages 180

₹ 150.00




Year of Publication: 2016
Published by: ಜ್ಯೋತಿ ಪ್ರಕಾಶನ
Address: ಎಂ-45, ಕರ್ನಾಟಕ ಬ್ಯಾಂಕ್ ರಸ್ತೆ, ವಿವೇಕಾನಂದ ಸರ್ಕಲ್ ಹತ್ತಿರ ಮೈಸೂರು- 570023
Phone: 9844212231

Synopsys

ಸಂಸ್ಕೃತಿ, ಸಾಹಿತ್ಯ ವಿಮರ್ಶೆ ಮತ್ತು ಜಾನಪದ ಎಂಬ ಮೂರು ಭಾಗಗಳಿರುವ ಈ ‘ಕಾಲು ದಾರಿ’ ಕೃತಿಯಲ್ಲಿ ಒಟ್ಟು 20 ಲೇಖನಗಳಿವೆ. ಸಂಸ್ಕೃತಿ ವಿಭಾಗದಲ್ಲಿ ಭಾರತದ ಸಾಂಸ್ಕೃತಿಕ ಆಚರಣೆಗಳು, ಬಹುಸಂಸ್ಕೃತಿಯ ಚರ್ಚೆ, ಸಾಂಸ್ಕೃತಿಕ ಅಧ್ಯಯನದ ಹೊಸ ಸಾಧ್ಯತೆಗಳು, ಮಹಿಳಾ ಸಬಲೀಕರಣ, ಮೀಸಲಾತಿ, ಪರ್ಯಾಯ ರಾಜಕಾರಣ ಕುರಿತ ಚರ್ಚೆ ಇದೆ.

ಸಾಹಿತ್ಯ ವಿಮರ್ಶೆ-ಈ ಭಾಗದಲ್ಲಿ ಕನ್ನಡದ ಮಹತ್ವದ ಬರಹಗಾರ ಪಿ,ಲಂಕೇಶ್ ಅವರ ಅವ್ವ(ಕವನ), ಸಂಕ್ರಾತಿ (ನಾಟಕ), ಅನಂತ ಮೂರ್ತಿ ಅವರ ಕಾದಂಬರಿಗಳು, ಕನ್ನಡದ ಮಹಿಳಾ ಕವಿಗಳು ತಮ್ಮ ಕವನಗಳ ಮೂಲಕ ಸೃಷ್ಟಿಸಿದ ಪುರಾಣ ಪ್ರತಿಮೆಗಳನ್ನು ಶೋಧಿಸಲಾಗಿದೆ.

ಜಾನಪದ ವಿಭಾಗದಲ್ಲಿ ಸಂವಹನ ಮಾಧ್ಯಮವಾಗಿ ಆಧುನಿಕ ಜಾನಪದವನ್ನು ನಿರೂಪಿಸುವ ಹಾಗೂ ಆಧುನಿಕ ಕಾಲದಲ್ಲಿ ರೂಪಾಂತರಗೊಳ್ಳಬೇಕಾದ ಜಾನಪದದ ಅಗತ್ಯವನ್ನು ಲೇಖಕ ಡಾ. ನಾಗಭೂಷಣ ಬಗ್ಗನಡು ಅವರು ವಿಶ್ಲೇಷಿಸಿದ್ದಾರೆ.

About the Author

ನಾಗಭೂಷಣ ಬಗ್ಗನಡು
(01 June 1976)

ಸಂಶೋಧಕ, ಲೇಖಕ ನಾಗಭೂಷಣ ಬಗ್ಗನಡು ಅವರು ಮೂಲತಃ ತುಮಕೂರಿನ ದೊಡ್ಡೇನಹಳ್ಳಿ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ‘ಬದಲಾಗುತ್ತಿರುವ ಆಧುನಿಕ ಪರಿಸರದಲ್ಲಿ ಜಾನಪದ’ ಪ್ರಬಂಧ ಮಂಡಿಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವೀಧರರು. ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.   ಬಂಡಾಯ ಚಳವಳಿ, ತಳ ಸಮುದಾಯಗಳ ಹಕ್ಕುಗಳ ಹೋರಾಟ, ಜನಪರ ಚಳವಳಿಗಳಲ್ಲಿ ಸಕ್ರಿಯರು. ಇವರ ಮೊದಲ ಕೃತಿ ‘ಆಧುನಿಕ ಜಾನಪದ’. ಕಡಕೋಳ ಮಡಿವಾಳಪ್ಪ, ಸುಡುಗಾಡು ಸಿದ್ಧರು, ಕಾಲುದಾರಿ, ಬೆಂಕಿ ಬೆಳಕು, ಲಂಕೇಶ್ ಒಂದು ನೆನಪು ಹಾಗೂ ಸಂಶೋಧನಾ ಕೃತಿಗಳು: ವೃತ್ತಿ ರಂಗಭೂಮಿ ನಾಟಕಗಳಲ್ಲಿ ಅಸ್ಪೃಷ್ಯತೆ ಮತ್ತು ದಲಿತತ್ವದ ನೆಲೆಗಳು, ದಲಿತ ಪುರಾಣಗಳು.  ...

READ MORE

Related Books