ಹರಿಶ್ಚಂದ್ರ ಚಾರಿತ್ರ: ಸಾಂಸ್ಕೃತಿಕ ಮುಖಾಮುಖಿ

Author : ಅಮರೇಶ ನುಗಡೋಣಿ

Pages 246

₹ 80.00




Year of Publication: 2006
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಸಂಕಲನದಲ್ಲಿ ರಾಘವಾಂಕನ ಹರಿಶ್ಚಂದ್ರ ಚಾರಿತ್ರ: ಸಾಂಸ್ಕೃತಿಕ ಮುಖಾಮುಖಿ' ಎನ್ನುವ ಸಂವಾದ ಸಂಕಿರಣದ ಮಾತು ಮತ್ತು ಬರಹಗಳು ಕೊಡಲಾಗಿದೆ.ಭಿನ್ನ ಚಿಂತನ ಕ್ರಮದ ವಿಮರ್ಶಕರು ಭಿನ್ನ ನೆಲೆಗಳಿಂದ ರಾಘವಾಂಕನ ಹರಿಶ್ಚಂದ್ರ ಕಾವ್ಯ'ವನ್ನು ಇಲ್ಲಿ ಚರ್ಚೆಗೆ ಒಡ್ಡಿದ್ದು, ಸಾಹಿತ್ಯಕ್ಕಿಂತ ಹೆಚ್ಚಾಗಿ ಸಾಮಾಜಿಕ ಸಂಗತಿಗಳಿಗೆ ತೆರೆದುಕೊಂಡ ಈ ಕೃತಿಯಲ್ಲಿ ಅನೇಕ ಆಲೋಚನಾ ಕೇಂದ್ರಗಳ ಮೂಲಕ ಭಿನ್ನ ದಿಕ್ಕುಗಳಿಗೆ ವಿಸ್ತರಿಸಿಕೊಳ್ಳುವ ಅಧ್ಯಯನದ ಮಾದರಿಗಳು ದಾಖಲಾಗಿವೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳು ಹೀಗಿವೆ: ಹರಿಶ್ಚಂದ್ರ ಚಾರಿತ್ರ: ಇದುವರೆಗಿನ ಅಧ್ಯಯನಗಳ ಹಿಂದಿನ ತಾತ್ವಿಕತೆ ೨. ಹರಿಹರ, ರಾಘವಾಂಕರ ಸೃಜನಶೀಲತೆಯ ಸಂಘರ್ಷ ೩. ಹರಿಶ್ಚಂದ್ರ ಚಾರಿತ್ರ: ಸತ್ಯದ ನಿರೂಪಣೆ ೪. ಜಾತಿ, ಅಸ್ಪೃಶ್ಯತೆ ಪ್ರಶ್ನೆಗಳು: ಹರಿಶ್ಚಂದ್ರ ಚಾರಿತ್ರ ಮುಖೇನ ೫. ಪ್ರಭುತ್ವ ಮತ್ತು ಜನತೆ: ಹರಿಶ್ಚಂದ್ರ ಚಾರಿತ್ರ ಮುಖೇನ ೬. ಮಹಿಳಾ ಪ್ರಶ್ನೆಗಳು: ಹರಿಶ್ಚಂದ್ರ ಚಾರಿತ್ರ ಮುಖೇನ ೭. ಚರಿತ್ರೆ ಮತ್ತು ಪುರಾಣಗಳ ಅಂತಃಸಂಬಂಧಗಳು ರಾಘವಾಂಕನ ಕಾವ್ಯಗಳ ಮುಖೇನ ೮. ಹರಿಶ್ಚಂದ್ರ ಚಾರಿತ್ರ ಮತ್ತು ರಾಘವಾಂಕನ ಇತರ ಕಾವ್ಯಗಳ ನಡುವಿನ ಅಂತರ್‌ಸಂಬಂಧಗಳು ೯. ರಾಘವಾಂಕನ ಕಾವ್ಯತತ್ವ: ಕೆಲವು ಟಿಪ್ಪಣಿಗಳು ೧೦. ಹರಿಶ್ಚಂದ್ರ ಕಾವ್ಯ-ಹರಿಶ್ಚಂದ್ರ ಚಾರಿತ್ರ

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Related Books