ಬೇಂದ್ರೆ ಕಾವ್ಯದ ಕುಹುಕ್ಕುಹೂ

Author : ಚೆನ್ನವೀರ ಕಣವಿ

Pages 100

₹ 60.00




Year of Publication: 2012
Published by: ಪ್ರಸಾರಾಂಗ, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌
Address: ಸಾಧನಕೇರಿ, ಧಾರವಾಡ-8

Synopsys

ಹೊಸಗನ್ನಡ ವಸಂತ ಕಾಲಕ್ಕೆ ಕೋಗಿಲೆಯಾಗಿ ಬಂದು ನಾಡಿನ ಮಾಮರದ ಕೊನಿಗೆ ಕೂತು ತುತ್ತೂರಿ ನಾದದೊಂದಿಗೆ ಹಾಡಲಾರಂಭಿಸಿ ಮುಂದಿನ ಆರೂವರೆ ದಶಕದ ಕಾಲ 'ನೂರು ಮರ ನೂರು ಸ್ವರಗಳನ್ನು ತೆಗೆದು ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ ಎಂದು ಅಂದ ಬೇಂದ್ರೆಯವರನ್ನು ತಮ್ಮ 'ಕಾವ್ಯಾಕ್ಸಿ'ಯಿಂದ ದಿಟ್ಟಿಸುತ್ತ, ನಿರುಕ್ಷಿಸುತ್ತ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರು ಅರವತ್ತು ವರುಷದಿಂದ ಬರೆಯುತ್ತ ಬಂದ ಹತ್ತು ಪ್ರಬಂಧಗಳು ಮತ್ತು ಎರಡು ಕವಿತೆಗಳು ಸಂಕಲನಗೊಂಡ ಈ ಕೃತಿ ಇಬ್ಬರೂ ಕವಿಗಳ ಹೃದಯವನ್ನು ಅರಿಯಲು ಆಧಾರವಾಗಿದೆ.

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Related Books