ದತ್ತ ಸಾಹಿತ್ಯ

Author : ಸಿಂಪಿ ಲಿಂಗಣ್ಣ

Pages 94




Published by: ಸಾಧನ ಮುದ್ರಣಾಲಯ
Address: ಸಾಧನ ಮುದ್ರಣಾಲಯ, ಧಾರವಾಡ

Synopsys

ಕವಿ ದ.ರಾ. ಬೇಂದ್ರೆಯವರ ಕೃತಿ ವಿಚಾರಗಳ ಪರಿಚಯ- ಲೇಖಕರೂ, ಸಾಹಿತಿಗಳೂ ಆದ ಸಿಂಪಿ ಲಿಂಗಣ್ಣನವರು ಬೇಂದ್ರೆಯವರ ಒಡನಾಡಿಗಳಾಗಿದ್ದರು.  ಬೇಂದ್ರೆಯವರ ಬದುಕು ಮತ್ತು ಬರಹಗಳ ಆಳವನ್ನು ಅರಿತಿರುವ ಕೆಲವೇ ಕೆಲವರಲ್ಲಿ ಸಿಂಪಿ ಲಿಂಗಣ್ಣನವರೂ ಒಬ್ಬರು. ತಾವು ಕಂಡ ಕವಿಯ ಕಾವ್ಯವನ್ನು ತಮ್ಮದೇ ನೆಲೆಯಲ್ಲಿ ವಿಶ್ಲೇಷಿರುವ ’ದತ್ತ ಸಾಹಿತ್ಯ’ ಕೃತಿ ಬೇಂದ್ರೆ ಅವರ ಸಾಹಿತ್ಯವನ್ನು ಅಭ್ಯಸಿಸುವವರಿಗೆ ಒಂದು ಪ್ರಮುಖ ಕೈಪಿಡಿಯಾಗುತ್ತದೆ. ಬೇಂದ್ರೆಯವರ ಬದುಕು ಮತ್ತು ಬರಹದ ಮೇಲೆ ಬೆಳಕು ಚೆಲ್ಲುವ ಈ ಕೃತಿ ಬೇಂದ್ರೆಯವರ ಕಾವ್ಯದ ಒಳನೋಟದ ಆಳವನ್ನೂ ವಿವರಿಸುತ್ತದೆ.

About the Author

ಸಿಂಪಿ ಲಿಂಗಣ್ಣ
(11 February 1905 - 05 May 1993)

ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ. 1922ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್‌ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. 1925ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ...

READ MORE

Related Books