ಕ್ರಿಯಾಪದ

Author : ರವಿಕುಮಾರ್ ನೀಹ

Pages 188

₹ 115.00




Year of Publication: 2011
Published by: ಪರಿಣತ ಪ್ರಕಾಶನ
Address: ನಂ. 44/1, 4ನೇ ಮುಖ್ಯರಸ್ತೆ, 3ನೇ ಹಂತ, 2ನೇ ಬ್ಲಾಕ್, ಬಸವೇಶ್ವರನಗರ, ಬೆಂಗಳೂರು

Synopsys

‘ಕ್ರಿಯಾಪದ’ ಲೇಖಕ, ವಿಮರ್ಶಕ ರವಿಕುಮಾರ್ ನೀಹ ಅವರು ಬರೆದ ಕೃತಿ. ಈ ಕೃತಿ ಲೇಖಕ, ಕಲಾವಿದ ಡಾ. ರಾಜಪ್ಪ ದಳವಾಯಿ ವ್ಯಕ್ತಿತ್ವ, ಕೃತಿಗಳ ಕುರಿತಾದ ಒಳನೋಟಗಳನ್ನು ಒಳಗೊಂಡಿದೆ. ರಾಜಪ್ಪ ದಳವಾಯಿ ಅವರ ಬದುಕು ಬರಹದ ಕುರಿತಾದ ಮಾಹಿತಿಗಳನ್ನು ನೀಡುವ ಮಹತ್ವದ ಕೃತಿಯಾಗಿದೆ.

About the Author

ರವಿಕುಮಾರ್ ನೀಹ
(15 July 1977)

ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೋಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ...

READ MORE

Related Books