ಪ್ರಣೀತ

Author : ಸಿ.ಎಸ್.ಭೀಮರಾಯ (ಸಿಎಸ್ಬಿ)

Pages 172

₹ 140.00




Year of Publication: 2022
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು, ಕಲಬುರಗಿ-1

Synopsys

ಸಿ.ಎಸ್. ಭೀಮರಾಯ ಅವರ ವಿಮರ್ಶಾತ್ಮಕ ಲೇಖನಗಳ ಸಂಕಲನ ‘ಪ್ರಣೀತ’. ಸಾಹಿತ್ಯ ಮಾಲಿಕೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಮೂಲಕ ಪ್ರಕಟಗೊಂಡ ಕೃತಿಯಿದು. ಕೃತಿಯ ಬೆನ್ನುಡಿಯಲ್ಲಿ ಪ್ರೊ. ಜಿ. ಬಿ. ಸಜ್ಜನ ಅವರ ನುಡಿಗಳಿದ್ದು, ಸಿ. ಎಸ್. ಭೀಮರಾಯ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದವರು. ಭೀಮರಾಯ ಕನ್ನಡ ಸಾಹಿತ್ಯ ವಿಮರ್ಶೆಯ ಎಲ್ಲಿಗಳನ್ನು ಹಿಗ್ಗಿಸುವ ವಿಮರ್ಶಕ, ಅವರ ವಿಮರ್ಶಾ ಕೃತಿಗಳು ವಿವರವಾದ ವಿಶ್ಲೇಷಣೆ, ವ್ಯಾಖ್ಯಾನ ಮತ್ತು ವಸ್ತುನಿಷ್ಠ ವಿಮರ್ಶೆಗಳಿಂದ ಕೂಡಿದೆ ಎಂಬುದಾಗಿ ಹೇಳಿದ್ದಾರೆ.

ಗಿರಡ್ಡಿ ಗೋವಿಂದರಾಜ ಅವರು ಹೇಳುವಂತೆ, ಸಿ. ಎಸ್. ಭೀಮರಾಯ ಕೃತಿನಿಷ್ಠ ವಿಮರ್ಶೆಯ ಶಿಸ್ತಿನಿಂದ ಬೆಳೆದ ವಿಮರ್ಶಕ, ಸೃಜನಶೀಲ ಕೃತಿಯು ತನ್ನ ಸಮಾಜ, ಸಂಸ್ಕೃತಿಯ ವಿಮರ್ಶೆ ಮತ್ತು ವಿಶ್ಲೇಷಣೆಗಳನ್ನು ಮಾಡುತ್ತಿರುತ್ತದೆ ಎಂಬ ವಿಶ್ವಾಸ ಅವರ ಕೃತಿ ವಿಮರ್ಶೆಯ ತಳದಲ್ಲಿದೆ ಎಂದಿದ್ದಾರೆ.

ಚಂದ್ರಶೇಖರ ಪಾಟೀಲ ಅವರು ಹೇಳಿದಂತೆ, ನೇರ, ದಿಟ್ಟ ಮತ್ತು ವಸ್ತುನಿಷ್ಠ ವಿಮರ್ಶೆಗೆ ಹೆಸರಾದ ಸಿ. ಎಸ್. ಭೀಮರಾಯ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ ಮತ್ತು ಉಪನ್ಯಾಸಕರು, ಆಧುನಿಕ ಕನ್ನಡ ಸಾಹಿತ್ಯದ ಹಲವಾರು ಲೇಖಕರ ಕೃತಿಗಳ ಬಗ್ಗೆ ಭೀಮರಾಯ ವಸ್ತುನಿಷ್ಠ ವಿಮರ್ಶೆ ಬರೆದಿದ್ದಾರೆ. ಲೇಖಕನ ಕಾಲ-ದೇಶದ ವಿವರಗಳು, ವೈಯಕ್ತಿಕ ಜೀವನದ ವಿವರಗಳು, ಸಂಸ್ಕೃತಿ ಚಿಂತನೆ ಮತ್ತು ಸಮಕಾಲೀನ. ಸಾಹಿತ್ಮಿಕ ಪ್ರವೃತ್ತಿಗಳ ಕುರಿತು ಗಂಭೀರ ವಿಚಾರಗಳು ಅವರ ವಿಮರ್ಶಾ ಬರವಣಿಗೆಯಲ್ಲಿ ಕಂಡುಬರುತ್ತವೆ ಎಂದಿದ್ದಾರೆ.

About the Author

ಸಿ.ಎಸ್.ಭೀಮರಾಯ (ಸಿಎಸ್ಬಿ)

ಲೇಖಕ ಸಿ.ಎಸ್.ಭೀಮರಾಯ  ಅವರು ಹೊಸ ತಲೆಮಾರಿನ ಕವಿ ಮತ್ತು ವಿಮರ್ಶಕ. 1981ರಲ್ಲಿ  ಜನನ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಭಾಷೆ ಉಪನ್ಯಾಸಕರು. ಈವರೆಗೆ ಕನ್ನಡದಲ್ಲಿ ಐದು ಮತ್ತು ಆಂಗ್ಲ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ವಿಮರ್ಶಾ ಲೇಖನಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ಕವಿತೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಕಾವ್ಯ, ಪ್ರಬಂಧ ಮತ್ತು ವಿಮರ್ಶೆಗಳಲ್ಲಿನ ಸಂವೇದನೆಗಳು, ಧ್ಯೇಯ-ಧೋರಣೆಗಳು ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳ ಬಗೆಗಿನ ತೀವ್ರ ಕಾಳಜಿ, ಅನ್ಯಾಯದ ವಿರುದ್ಧ ಸಿಡಿದೇಳುವ ಆಕ್ರೋಶ, ಸಿಟ್ಟು, ವ್ಯಂಗ್ಯ, ಬಂಡಾಯ-ಅವರ ಬರವಣಿಗೆಯಲ್ಲಿ ಗಮನ ಸೆಳೆಯುತ್ತವೆ.  ಕೃತಿಗಳು: ...

READ MORE

Related Books