ನೇತುಬಿದ್ದ ನವಿಲು

Author : ರಹಮತ್ ತರೀಕೆರೆ

Pages 292

₹ 225.00




Year of Publication: 2013
Published by: ಲಂಕೇಶ್ ಪ್ರಕಾಶನ
Address: ಬೆಂಗಳೂರು

Synopsys

ರಹಮತ್ ತರೀಕೆರೆ ಅವರು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಈ ಗ್ರಂಥದಲ್ಲಿ ಸಂಕಲಿಸಲಾಗಿದೆ. ನೇತು ಬಿದ್ದ ನವಿಲು ಪುಸ್ತಕದ ಬರಹಗಳನ್ನು ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆ ಭಾಗ ‘ವಿಚಾರ’ದಲ್ಲಿ ಹತ್ತು ಲೇಖನಗಳಿವೆ. ಸದ್ಯದ ಇಕ್ಕಟ್ಟುಗಳಲ್ಲಿ ಶ್ರೀಯವರ ನೆನಪು, ಕನ್ನಡ ಸಾಹಿತ್ಯ: ನಾಡು ಮತ್ತು ಅಧಿಕಾರದ ಕಲ್ಪನೆ, ಬ್ರಿಟಿಷ್ ಸ್ತುತಿ ಗೀತೆಗಳು: ಭಾಷೆ ಮತ್ತು ಓಲೈಕೆ, ಹೊಸ ಮನುಷ್ಯರ ಹುಡುಕಾಟ, ಹೊಸ ತಲೆಮಾರಿಗೆ ಹೊಸ ಚಳುವಳಿ, ಈಚಿನ ಕನ್ನಡ ಸಾಹಿತ್ಯ; ಕೆಲವು ಹೊಳಹುಗಳು, ಆತ್ಮಕಥೆ: ಕನ್ನಡ ಗದ್ಯದ ಅಧೋಲೋಕ, ದಲಿತ ಚಳುವಳಿ ಮತ್ತು ನೇತು ಬಿದ್ದ ನವಿಲು, ಕರ್ನಾಟಕ ಸಂಸ್ಕೃತಿ ಮತ್ತು ಲೋಹಿಯಾವಾದ, ಸಂಶೋಧನೆ ಮತ್ತು ಮತೀಯತೆ ಎಂಬ ಲೇಖನಗಳಿವೆ. ಎರಡನೇ ಭಾಗ ‘ವಿದ್ಯಮಾನ’ದಲ್ಲಿ ಏಳು ಲೇಖನಗಳಿವೆ. ದೇವರಾಜ ಅಸರಸೂ ಲಂಕೇಶರ ಗದ್ಯವೂ, ಆಹಾರದ ಮೇಲೆ ಹಲ್ಲೆಗಳೇಕೆ?, ಧರ್ಮ ಪರಿವರ್ತನೆ: ಕೆಲವು ಪ್ರಶ್ನೆಗಳು, ಸಂಸ್ಕೃತ ವಿಶ್ವವಿದ್ಯಾಲಯ ಕುರಿತು, ಕವಲು ಹಾದಿಯಲ್ಲಿ ಮುಸ್ಲಿಮರು, ಮಹಿಳೆ-ವೈಧವ್ಯ ಮತ್ತು ರಾಜಕಾರಣ, ಬಳ್ಳಾರಿ ಸೀಮೆಯಲ್ಲಿ ಚುನಾವಣೆ ಮತ್ತು ರೊಕ್ಕ. ಮೂರನೇ ಭಾಗ ‘ಕೃತಿ’ಯಲ್ಲಿ ಬದಲಿ ರಾಜಕೀಯ ಚಿಂತನೆ, ಫೈಜ್ ಕಾವ್ಯ, ಮಲೆನಾಡನ್ನು ಕಾಣಲು ಹೊಸ ದಿಟ್ಟಿ, ನುಗಡೋಣಿ ಕತೆಗಳಿ, ಅಪಮಾನ-ಅಭಿಮಾನದ ಎರಡು ನೆಲೆಗಳು ಬರಹಗಳಿವೆ. ನಾಲ್ಕನೆಯ ಭಾಗ ’ತಿರುಗಾಟ’ದಲ್ಲಿ ಪೂರ್ವಜರ ಊರು ಸಂಗನಕಲ್ಲಿ, ಶಿವನೂ ಬುದ್ಧನೂ ಕೂಡುವ ನಾಡು, ಚಿರಾಪುಂಜಿಯ ನೆನಪು, ಅಂತರಗಟ್ಟೆ ಜಾತ್ರೆಯ ಟಿಪ್ಪಣಿ, ಹಾದಿ ಬೀದಿಯಲ್ಲಿ ಖಂಡಾಂತರ ವಾಸ್ತುಕಲೆ ಲೇಖನಗಳಿವೆ ಐದನೆಯ ’ಜನ’ ಭಾಗದಲ್ಲಿ ಬೆಳಗಲ್ ವೀರಣ್ಣ, ಪಿಬಿ ಶ್ರೀನಿವಾಸ್, ಗುರು ನೊಸಂತಿ, ಮರೆಯಾದ ಹನುಮಂತಯ್ಯ ಲೇಖನಗಳಿವೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books