ಕನ್ನಡ ವಿಮರ್ಶಾ ವಿವೇಕ

Author : ಲಕ್ಷ್ಮಣ ಕೊಡಸೆ

Pages 560

₹ 325.00




Year of Publication: 2008
Published by: ಸುಮುಖ ಪ್ರಕಾಶನ
Address: ಮಾಗಡಿ ರಸ್ತೆ, ಟೋಲ್ ಗೇಟ್, ಬೆಂಗಳೂರು-569923
Phone: 94484 84726

Synopsys

ಕನ್ನಡ ವಿಮರ್ಶಾ ವಿವೇಕ-ಲೇಖಕ ಲಕ್ಷ್ಮಣ ಕೊಡಸೆ ಅವರ ಸಂಪಾದಿತ ಕೃತಿ. ಕನ್ನಡದ ಕ್ಲಾಸಿಕ್ ವಿಮರ್ಶೆಗಳ ಪ್ರಾತಿನಿಧಿಕ ಸಂಕಲನವಿದು. ಬಿಎಂಶ್ರೀ ಅವರಿಂದ ಮೊದಲುಗೊಂಡು ರಹಮತ್ ತರೀಕೆರೆ ವರೆಗೆ ನಡೆದ ಸಾಹಿತ್ಯ ಚಿಂತನೆಯ ಪ್ರೌಢ ಲೇಖನಗಳಿವೆ. ಮುಳಿಯ ತಿಮ್ಮಪ್ಪಯ್ಯ, ಮಾಸ್ತಿ, ಎಸ್.ವಿ.ರಂಗಣ್ಣ, ಕುವೆಂಪು, ತೀನಂಶ್ರೀ, ಕೀರ್ತಿನಾಥ ಕುರ್ತಕೋಟಿ , ಜಿ.ಎಚ್.ನಾಯಕ, ಸಿ,ಎನ್.ರಾಮಚಂದ್ರನ್ ಮೊದಲಾದವರ ಪ್ರಬುದ್ಧ ಲೇಖನಗಳು ಒಂದೇ ಕಡೆ ಸಿಗುವಂತಹ ವೇದಿಕೆ. ಕನ್ನಡ ಸಾಹಿತ್ಯದ ಚರಿತ್ರೆಯೂ, ಕನ್ನಡ ವಿಮರ್ಶಾ ಚರಿತ್ರೆಯೂ ಏಕಕಾಲದಲ್ಲಿ ಓದುಗರಿಗೆ ಲಭಿಸುವಂತೆ ಇಲ್ಲಿಯ ಲೇಖನಗಳ ಆಯ್ಕೆ ಇದೆ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಸಲ್ಲಿಸಿದ ಗೌರವ ಗ್ರಂಥವಿದು. ಈ ನೆಪದಲ್ಲಿ ಕನ್ನಡದ ಅತ್ಯುತ್ತಮ ವಿಮರ್ಶೆಗಳ ಬಾಗಿನವಿದು.

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books