ಶೂನ್ಯ ಸಂಪಾದನೆ: ಪ್ರಸ್ತುತ ಸವಾಲುಗಳು

Author : ಬಸವರಾಜ ಸಬರದ

Pages 32

₹ 10.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಶೂನ್ಯ ಸಂಪಾದನೆಗಳು ಇತ್ಯ ವಚನಗಳ ಸಂಕಲನವೂ ಆಗದೆ ಅತ್ತ ಸ್ವತಂತ್ರ ಕಾವ್ಯಗಳೂ ಆಗಿರದೆ ವಿಚಿತ್ರ ರೂಪವೊಂದನ್ನು ತೆಗೆದು ಕೊಂಡಿದ್ದು ವಚನ ಚಳುವಳಿಯ ಮೂಲ ಉದ್ದೇಶವನ್ನು ಮರೆ ಮಾಡಿಬಿಡುವ ಅಪಾಯವಿದೆ ಎಂಬುದನ್ನು ಸ್ಕೂಲವಾಗಿ ಈಕೃತಿಯಲ್ಲಿ ಚರ್ಚಿಸಲಾಗಿದೆ. ಶೂನ್ಯಸಂಪಾದನೆಗಳ ಸೃಷ್ಟಿಯ ಹಿಂದಿರುವ ಉದ್ದೇಶ, ಶರಣರ ಮೂಲ ವಚನಗಳಿಗಿಂತಲೂ ಇವು ಹೆಚ್ಚು ಜನಪ್ರಿಯವಾಗಲು ಕಾರಣ, ವಚನ ಚಳುವಳಿಯ ಮೂಲ ಆಶಯಕ್ಕೆ ಇವು ಬದ್ದವಾಗಿವೆಯೇ ಎಂಬುದನ್ನು ಈ ಕಿರುಕೃತಿಯಲ್ಲಿ ವಿಶ್ಲೇಷಿಸಲಾಗಿದೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books