ಸೀಮೋಲ್ಲಂಘನ

Author : ಜಿ.ಎಸ್. ಆಮೂರ

Pages 200

₹ 100.00




Year of Publication: 2011
Published by: ಪ್ರಿಯದರ್ಶನಿ ಪ್ರಕಾಶನ
Address: # 138, 7ನೇ ಸಿ ರಸ್ತೆ, ಹಂಪಿನಗರ, ಬೆಂಗಳೂರು-560104

Synopsys

ಸೀಮೋಲ್ಲಂಘನ- ಜಿ.ಎಸ್. ಅಮೂರ ಅವರ ವಿಮರ್ಶಾ ಲೇಖನಗಳ ಸಂಕಲನ. ಸಾಹಿತ್ಯ ಪ್ರಕಾರ, ಸಾಂಸ್ಕೃತಿಕ ಓದು, ಸಾಹಿತ್ಯಕ ಸಂದರ್ಭಗಳನ್ನು ಚರ್ಚಿಸುತ್ತವೆ. ಕೆಲವು ಲೇಖನಗಳು ಲೇಖಕ ದೃಷ್ಟಿಯನ್ನು ಅವಲಂಬಿಸಿವೆ. ಇನ್ನೂ ಕೆಲವು ಅದರಾಚೆ ಹೇಳುತ್ತವೆ. ಆದ್ದರಿಂದ, ವಿಮರ್ಶಕರು ಈ ಕೃತಿಗೆ ‘ಸೀಮೋಲ್ಲಂಘನ’ ಎಂದು ಹೆಸರಿಸಿದ್ದಾರೆ. ಲೇಖನಗಳು ಕನ್ನಡ ಸಾಹಿತ್ಯದ ಸಿರಿವಂತಿಕೆಯನ್ನು ಇಂಗ್ಲಿಷಿಗೆ ಪರಿಚಯಿಸುತ್ತವೆ. ಆರ್.ಕೆ. ನಾರಾಯಣ, ಎ.ಎಸ್. ನಯನಾರ್ ಮುಂತಾದ ಲೇಖಕರ ಕೃತಿಗಳ ವಿಮರ್ಶೆ ಇಲ್ಲಿದೆ. ಕಾದಂಬರಿ ವಲಯದಲ್ಲಿ ಭಾರತೀಯ ಪರಂಪರೆಯನ್ನು ಸ್ಥಾಪಿಸುವ ಸ್ವದೇಶಿ ಉತ್ಸಾಹವನ್ನು ಈ ಕೃತಿ ಒಳಗೊಂಡಿದೆ. ಕಾದಂಬರಿಯು ಅನೇಕತ್ವವನ್ನು ಒಪ್ಪಿಕೊಳ್ಳುತ್ತದೆ. ಆದರೆ, ಕಾದಂಬರಿಯ ವಸ್ತು ನಿಯಂತ್ರಣದ ನಿಯಮಗಳಿವೆ? ಎಂಬುದನ್ನು ಚಿಂತಿಸುತ್ತದೆ. ಈ ಸಂಕಲನದ -ಕವಿರಾಜ ಮಾರ್ಗ; ಸಾಧನೆ ಹಾಗೂ ಪ್ರಸ್ತುತತೆ’ ಲೇಖನವು ಪ್ರಾಚೀನ ಕೃತಿಯೊಂದರ ಪ್ರಸ್ತುತ ಅಧ್ಯಯನದ ಅಗತ್ಯತೆಯನ್ನು ಪ್ರತಿಪಾದಿಸುತ್ತದೆ. ಹೊಸ ಹೊಳವುಗಳನ್ನು, ಒಳನೋಟಗಳನ್ನು ನೀಡುತ್ತದೆ. ಕನ್ನಡದ ನವ್ಯ, ನವ್ಯೋತ್ತರ ಹೀಗೆ ವಿವಿಧ ಕಾಲಘಟ್ಟದಿಂದ ಆಧುನಿಕ ಕವಿಗಳ ಕಾವ್ಯಗಳನ್ನು ವಿಮರ್ಶೆಗೆ ಒಳಪಡಿಸಿದ್ದು, ಪ್ರತಿ ವಿಮರ್ಶೆಯು ಗಂಭೀರ-ಗೌರವಪೂರ್ಣವಾಗಿದೆ. ಈ ಕೃತಿಯು 1999 ರಲ್ಲಿ ಮೊದಲು ಪ್ರಕಟಗೊಂಡಿತ್ತು. 

About the Author

ಜಿ.ಎಸ್. ಆಮೂರ
(08 May 1925 - 28 September 2020)

ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...

READ MORE

Related Books