ಶಬ್ದದ ಬೆಡಗು

Author : ಕಾಶೀನಾಥ ಅಂಬಲಗೆ

Pages 199

₹ 100.00




Year of Publication: 2002
Published by: ಜಯನಗರ ಅಭಿವೃದ್ಧಿ ಸಂಘ
Address: ಸೇಡಂ ರೋಡ್‌, ಕಲಬುರ್ಗಿ- 585105

Synopsys

‘ಶಬ್ದದ ಬೆಡಗು’ ಕಾಶಿನಾಥ ಅಂಬಲಗೆ ಬರೆದ ವಿಮರ್ಶತ್ಮಕ ಕೃತಿಯಾಗಿದೆ. ಜನಜಾಗ್ಯತಿ ಮೂಡಿಸಿದ ಜನಪರ ಸಾಹಿತ್ಯವಾಗಿ ರೂಪುಗೊಂಡ ವಚನ ಸಾಹಿತ್ಯದ ಬಗ್ಗೆ ಅನೇಕ ವಿಮರ್ಶಕರಿಂದ ಇಲ್ಲಿ ಲೇಖನಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಬಸವ ಪೂರ್ವ ಹಾಗೂ ಬಸವೋತ್ತರ ಕಾಲದ ಎಲ್ಲ ವಚನ ಸಾಹಿತ್ಯವನ್ನೂ ಒಂದು ಕ್ರಾಂತಿಕಾರಿ ಚಳುವಳಿಯೆಂದು ಪರಿಗಣಿಸಿ ಚರ್ಚಿಸಲಾಗಿದೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Reviews

ಹೊಸತು- 2003- ಫೆಬ್ರವರಿ

ಕ್ರಾಂತಿಯ ಕಹಳೆ ಮೊಳಗಿಸುತ್ತ ಬಂದ ವಚನ ಸಾಹಿತ್ಯವು ಸಮಾಜದಲ್ಲಿ ಜಡ್ಡುಕಟ್ಟಿ ಕುಳಿತಿದ್ದ ಕೊಳೆ-ಕಳೆಗಳನ್ನು ಗುಡಿಸಿ ತೆಗೆಯುವಲ್ಲಿ ಇನ್ನಿತರ ವೇದ ಪುರಾಣೇತಿಹಾಸಗಳ ಸಾಹಿತ್ಯಕ್ಕಿಂತ ಯಶಸ್ವಿಯಾಗಿ - ಕ್ಷಿಪ ವಾಗಿ ಕೆಲಸ ಮಾಡಿದೆ. ಜನಜಾಗೃತಿ ಮೂಡಿಸಿದ ಜನಪರ ಸಾಹಿತ್ಯವಾಗಿ ರೂಪುಗೊಂಡ ವಚನ ಸಾಹಿತ್ಯದ ಬಗ್ಗೆ ಅನೇಕ ವಿಮರ್ಶಕರಿಂದ ಇಲ್ಲಿ ಲೇಖನಗಳನ್ನು ಸಂಗ್ರಹಿಸಿ ಕೊಡ ಲಾಗಿದೆ. ಬಸವ ಪೂರ್ವ ಹಾಗೂ ಬಸವೋತ್ತರ ಕಾಲದ ಎಲ್ಲ ವಚನ ಸಾಹಿತ್ಯವನ್ನೂ ಒ೦ದು ಕ್ರಾಂತಿಕಾರಿ ಚಳುವಳಿಯೆಂದು ಪರಿಗಣಿಸಿ ಚರ್ಚಿಸಲಾಗಿದೆ.

Related Books