ಗದ್ಯ ಸಂಗಾತಿ

Author : ಅಶೋಕ ನರೋಡೆ

Pages 168

₹ 100.00




Year of Publication: 2010
Published by: ಕುಕ್ಕೇಶ್ರೀ ಪ್ರಕಾಶನ
Address: #21, ಮಾಚೋನಹಳ್ಳಿ ಕಾಲೋನಿ, ವಿಶ್ವನೀದಂ ಅಂಚೆ, ಬೆಂಗಳೂರು ಉತ್ತರ ತಾಲ್ಲೂಕು 560009, \n
Phone: 984505248

Synopsys

‘ಗದ್ಯ ಸಂಗಾತಿ’ ಕೃತಿಯು ಅಶೋಕ ನರಾಡೆ ಅವರ ವಿಮರ್ಶಾ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ನವೋದಯ - ನವ್ಯ- ನವೋತ್ತರಗಳಲ್ಲೇ ಸಾಹಿತ್ಯದ ಸ್ವರೂಪ ಬೇರೆ ಬೇರೆಯಾಗಿತ್ತು. ವೈಚಾರಿಕ - ದಲಿತ ಪ್ರಗತಿಶೀಲ ಎಂದು ಕರೆಯಲಾದ ಸಾಹಿತ್ಯ ಇನ್ನೊಂದು ಜಾಡುಹಿಡಿದು ಜನರನ್ನೆಚ್ಚರಿಸುವ ಪ್ರಯತ್ನ ಮಾಡಿತು. ಇಂಥ ಕಾಲದಲ್ಲೇ ಪರಂಪರೆಯ, ಜಾತಿಮತದ ಸುಳಿಯಿಂದ ಹೊರಗೆ ಬಂದಂಥ ಅಂತರ್ಜಾತೀಯ - ಅಂತರ್ ಮತೀಯ - ಪ್ರೇಮವಿವಾಹಗಳ ಕಥಾವಸ್ತುವನ್ನೊಳಗೊಂಡ ವಿಪುಲ ಸಾಹಿತ್ಯ ರಚನೆಯಾಯಿತು. ಇದರಿಂದ ಒಂದು ಸಾಮಾಜಿಕ ಪಲ್ಲಟವಾದದ್ದೇನೋ ನಿಜವಾದರೂ ಜನರಿಗೆ ಇದರಿಂದ ಸ್ವಾತಂತ್ರ್ಯ ಮತ್ತು ಸ್ಟೇಚ್ಛೆಯ ಅಂತರ ತಿಳಿಯದಂಥ ಸ್ಥಿತಿ ನಿರ್ಮಾಣವಾಯಿತು. ಎಲ್ಲ ಕಾಲದ ಲೇಖಕರು ಇದನ್ನು ಗಮನಿಸಿ ತಮ್ಮ ಕೃತಿಗಳಲ್ಲಿ ಅದನ್ನು ಪ್ರತಿಫಲಿಸಿದ್ದಾರೆ. ಈ ಕಾಲದ ಸಾಹಿತ್ಯಕ್ಕೆ ಸಾಕಷ್ಟು ವಿಮರ್ಶೆಗಳೂ ಬಂದಿವೆ, ವಿಮರ್ಶೆಗಳಿಗೂ ವಿಮರ್ಶೆಗಳು ಬಂದು ಒಂದು ರೀತಿಯ ಚಿಂತನ-ಮಂಥನ ನಡೆದಿದೆ. ಇಲ್ಲಿನ ಬರಹಗಳಲ್ಲಿ ಡಾ| ಅಶೋಕ ನರೋಡೆ ತಮ್ಮ ಅನಿಸಿಕೆಗಳನ್ನು ಕೃತಿ ವಸ್ತು ವಿಶ್ಲೇಷಣೆಯೊಂದಿಗೆ ನೀಡಿದ್ದು, ಆಯಾ ಬರಹಗಾರರ ಬರವಣಿಗೆಗೆ ಪ್ರೇರಕ ಶಕ್ತಿ ಏನಿರಬಹುದೆಂಬ ಹುಡುಕಾಟವನ್ನೂ ಮಾಡಿದ್ದಾರೆ.

About the Author

ಅಶೋಕ ನರೋಡೆ
(01 March 1965)

ಅಶೋಕ ನರೋಡೆ ಎಂದೇ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾದ ಅಶೋಕ ಮುರಿಗೆಪ್ಪ ನರೋಡೆ, ಬೆಳಗಾವಿಯ ಅಥಣಿಯಲ್ಲಿ 1965 ಮಾರ್ಚಿ 01 ರಲ್ಲಿ ಜನಿಸಿದರು. ಕನ್ನಡ ಪ್ರಾಧ್ಯಾಪಕರು, ಕವಿಗಳು, ಸಂಶೋಧಕರು. ಮಹಾಲಿಂಗಪುರದ ಕಲಾ ಹಾಗೂ ಡಿ.ಡಿ.ಎಸ್, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ‘ಏಕಲವ್ಯನ ಪಾತ್ರ : ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಕರ್ನಾಟಕ ವಿ.ವಿಯಿಂದ ಪಿಎಚ್.ಡಿ ಪಡೆದಿದ್ದಾರೆ. ‘ರನ್ನ ವಿಚಾರ ವೇದಿಕೆ, ಕಾವ್ಯ ಕಾರಂಜಿ, ಅಪೂರ್ವ ಪ್ರಕಾಶನಗಳಂತಹ ಸಂಸ್ಥೆಗಳ - ಸಂಘಟಕರು. ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವರ ಹೊಸಗನ್ನಡ ಕಾವ್ಯ ಸಂಚಯ ಪಠ್ಯಗ್ರಂಥವೂ ಆಗಿದೆ.  ‘ಬೇಡಿಕೆ, ಆಸ್ಫೋಟ, ನದಿ ಮತ್ತು ನಾನು, ಮಧುರ ...

READ MORE

Reviews

(ಹೊಸತು, ಫೆಬ್ರವರಿ 2011, ಪುಸ್ತಕದ ಪರಿಚಯ)

ಪ್ರಸಿದ್ಧ ಬರಹಗಾರರ ಕೆಲವು ಕೃತಿಗಳನ್ನಾಯ್ತು ವಿಮರ್ಶೆ ಮಾಡಿದ ಈ ಸಂಕಲನದಲ್ಲಿ ನಾಲ್ಕು ವಿಭಾಗಗಳಿದ್ದು ಕಾದಂಬರಿ - ಕಥೆ - ಜೀವನ ಚರಿತ್ರೆ - ಅನುವಾದಗಳೆಂದು ವರ್ಗಿಕರಿಸಲಾಗಿದೆ. ನವೋದಯ - ನವ್ಯ- ನವೋತ್ತರಗಳಲ್ಲೇ ಸಾಹಿತ್ಯದ ಸ್ವರೂಪ ಬೇರೆ ಬೇರೆಯಾಗಿತ್ತು. ವೈಚಾರಿಕ - ದಲಿತ ಪ್ರಗತಿಶೀಲ ಎಂದು ಕರೆಯಲಾದ ಸಾಹಿತ್ಯ ಇನ್ನೊಂದು ಜಾಡುಹಿಡಿದು ಜನರನ್ನೆಚ್ಚರಿಸುವ ಪ್ರಯತ್ನ ಮಾಡಿತು. ಇಂಥ ಕಾಲದಲ್ಲೇ ಪರಂಪರೆಯ, ಜಾತಿಮತದ ಸುಳಿಯಿಂದ ಹೊರಗೆ ಬಂದಂಥ ಅಂತರ್ಜಾತೀಯ - ಅಂತರ್ ಮತೀಯ - ಪ್ರೇಮವಿವಾಹಗಳ ಕಥಾವಸ್ತುವನ್ನೊಳಗೊಂಡ ವಿಪುಲ ಸಾಹಿತ್ಯ ರಚನೆಯಾಯಿತು. ಇದರಿಂದ ಒಂದು ಸಾಮಾಜಿಕ ಪಲ್ಲಟವಾದದ್ದೇನೋ ನಿಜವಾದರೂ ಜನರಿಗೆ ಇದರಿಂದ ಸ್ವಾತಂತ್ರ್ಯ ಮತ್ತು ಸ್ಟೇಚ್ಛೆಯ ಅಂತರ ತಿಳಿಯದಂಥ ಸ್ಥಿತಿ ನಿರ್ಮಾಣವಾಯಿತು. ಎಲ್ಲ ಕಾಲದ ಲೇಖಕರು ಇದನ್ನು ಗಮನಿಸಿ ತಮ್ಮ ಕೃತಿಗಳಲ್ಲಿ ಅದನ್ನು ಪ್ರತಿಫಲಿಸಿದ್ದಾರೆ. ಈ ಕಾಲದ ಸಾಹಿತ್ಯಕ್ಕೆ ಸಾಕಷ್ಟು ವಿಮರ್ಶೆಗಳೂ ಬಂದಿವೆ, ವಿಮರ್ಶೆಗಳಿಗೂ ವಿಮರ್ಶೆಗಳು ಬಂದು ಒಂದು ರೀತಿಯ ಚಿಂತನ-ಮಂಥನ ನಡೆದಿದೆ. ಇಲ್ಲಿನ ಬರಹಗಳಲ್ಲಿ ಡಾ| ಅಶೋಕ ನರೋಡೆ ತಮ್ಮ ಅನಿಸಿಕೆಗಳನ್ನು ಕೃತಿ ವಸ್ತು ವಿಶ್ಲೇಷಣೆಯೊಂದಿಗೆ ನೀಡಿದ್ದು, ಆಯಾ ಬರಹಗಾರರ ಬರವಣಿಗೆಗೆ ಪ್ರೇರಕ ಶಕ್ತಿ ಏನಿರಬಹುದೆಂಬ ಹುಡುಕಾಟವನ್ನೂ ಮಾಡಿದ್ದಾರೆ. ನಿರಂಜನರ ಚಿರಸ್ಮರಣೆ, ಎಚ್‌, ಎನ್. ಅವರ ತೆರೆದ ಮನ, ರು. ನಿಂ ಬೆಳಗಲಿ ಅವರ ಮರಾಠಿ ಅನುವಾದಗಳು, ಇಲ್ಲಿ ವಿಮರ್ಶೆಗೊಳಗಾದ ಕೆಲವು ಕೃತಿಗಳು

ನವೋದಯ - ನವ್ಯ- ನವೋತ್ತರಗಳಲ್ಲೇ ಸಾಹಿತ್ಯದ ಸ್ವರೂಪ ಬೇರೆ ಬೇರೆಯಾಗಿತ್ತು. ವೈಚಾರಿಕ - ದಲಿತ ಪ್ರಗತಿಶೀಲ ಎಂದು ಕರೆಯಲಾದ ಸಾಹಿತ್ಯ ಇನ್ನೊಂದು ಜಾಡುಹಿಡಿದು ಜನರನ್ನೆಚ್ಚರಿಸುವ ಪ್ರಯತ್ನ ಮಾಡಿತು. ಇಂಥ ಕಾಲದಲ್ಲೇ ಪರಂಪರೆಯ, ಜಾತಿಮತದ ಸುಳಿಯಿಂದ ಹೊರಗೆ ಬಂದಂಥ ಅಂತರ್ಜಾತೀಯ - ಅಂತರ್ ಮತೀಯ - ಪ್ರೇಮವಿವಾಹಗಳ ಕಥಾವಸ್ತುವನ್ನೊಳಗೊಂಡ ವಿಪುಲ ಸಾಹಿತ್ಯ ರಚನೆಯಾಯಿತು. ಇದರಿಂದ ಒಂದು ಸಾಮಾಜಿಕ ಪಲ್ಲಟವಾದದ್ದೇನೋ ನಿಜವಾದರೂ ಜನರಿಗೆ ಇದರಿಂದ ಸ್ವಾತಂತ್ರ್ಯ ಮತ್ತು ಸ್ಟೇಚ್ಛೆಯ ಅಂತರ ತಿಳಿಯದಂಥ ಸ್ಥಿತಿ ನಿರ್ಮಾಣವಾಯಿತು. ಎಲ್ಲ ಕಾಲದ ಲೇಖಕರು ಇದನ್ನು ಗಮನಿಸಿ ತಮ್ಮ ಕೃತಿಗಳಲ್ಲಿ ಅದನ್ನು ಪ್ರತಿಫಲಿಸಿದ್ದಾರೆ. ಈ ಕಾಲದ ಸಾಹಿತ್ಯಕ್ಕೆ ಸಾಕಷ್ಟು ವಿಮರ್ಶೆಗಳೂ ಬಂದಿವೆ, ವಿಮರ್ಶೆಗಳಿಗೂ ವಿಮರ್ಶೆಗಳು ಬಂದು ಒಂದು ರೀತಿಯ ಚಿಂತನ-ಮಂಥನ ನಡೆದಿದೆ. ಇಲ್ಲಿನ ಬರಹಗಳಲ್ಲಿ ಡಾ| ಅಶೋಕ ನರೋಡೆ ತಮ್ಮ ಅನಿಸಿಕೆಗಳನ್ನು ಕೃತಿ ವಸ್ತು ವಿಶ್ಲೇಷಣೆಯೊಂದಿಗೆ ನೀಡಿದ್ದು, ಆಯಾ ಬರಹಗಾರರ ಬರವಣಿಗೆಗೆ ಪ್ರೇರಕ ಶಕ್ತಿ ಏನಿರಬಹುದೆಂಬ ಹುಡುಕಾಟವನ್ನೂ ಮಾಡಿದ್ದಾರೆ.

Related Books