ಅಭಿವ್ಯಕ್ತಿ ಮತ್ತು ಅರ್ಥವಿನ್ಯಾಸ

Author : ಗುರುಪಾದ ಮರಿಗುದ್ದಿ

Pages 214

₹ 150.00




Year of Publication: 2011
Published by: ಸಚಿನ್‌ ಪಬ್ಲಿಷರ್ಸ
Address: # 624, 9 ನೇ ಡಿ ಮೇನ್‌, ಹಂಪಿನಗರ, ಬೆಂಗಳೂರು-560104
Phone: 080234033

Synopsys

ಅಭಿವ್ಯಕ್ತಿ ಮತ್ತು ಅರ್ಥಪೂರ್ಣ ವಿನ್ಯಾಸ ಹದಿನೇಳು ಲೇಖನಗಳ ಸಂಕಲನವಾಗಿ.ದೆ ಕನ್ನಡದ ಇಂದಿನ ಸ್ಥಾನಮಾನದ ಬಗೆಗೆ ವಿಚಾರಿಸುವಾಗ ಕೇವಲ ಅಭಿಮಾನ ಒಂದೇ ಸಾಲದು. ಹೊಸ ಆರ್ಥಿಕ ನೀತಿಗಳು ಜಾಗತೀಕರಣದ ಸಂಧರ್ಭ ಸಮಸ್ಯೆಯನ್ನು ಸಂಕೀರ್ಣಗೊಳಿಸಿದೆ. ಕನ್ನಡ ಕಥನ ಪರಂಪರೆಯ ವಿವಿಧ ಆಯಾಮಗಳಲ್ಲಿ ಕಥೆ ಕಾದಂಬರಿಗಳು ಹೇಗೆ ಕಾಣಿಸುತ್ತವೆ ಎಂಬುದು ಕುತೂಹಲದ ಅಂಶ. ವಿಶೇಷವಾಗಿ ಸಾಂಸ್ಕೃತಿಕ ಲೋಕದ ಅವಜ್ಞೆಗೆ ಒಳಗಾದ ಕೃತಿಗಳ, ವ್ಯಕ್ತಿಗಳ ಕುರಿತು ಇಲ್ಲಿ ಬರೆಯಲಾಗಿದೆ. ಒಂದೊಂದು ಕೃತಿಗಳನ್ನು ಸರಳವಾಗಿ ಸ್ಪುಟವಾಗಿ ರೂಪಿಸಲಾಗಿದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books