ಕನ್ನಡದಲ್ಲಿ ಕಾವ್ಯತತ್ವ

Author : ಕೆ.ಕೃಷ್ಣಮೂರ್ತಿ

Pages 100

₹ 85.00




Year of Publication: 2018
Published by: ಡಾ. ಕೆ.ಕೃಷ್ಣಮೂರ್ತಿ ಸಂಸ್ಕೃತ ಸಂಶೋಧನ ಪ್ರತಿಷ್ಠಾನ
Address: #22, ಚಿರಂತನ, 1ನೇ ಮುಖ್ಯರಸ್ತೆ, ಕೃಷ್ಣಮೂರ್ತಿ ಲೇಔಟ್, ಮೈಸೂರು-5700091
Phone: 9448553797

Synopsys

ಕನ್ನಡದಲ್ಲಿ ಕಾವ್ಯತತ್ವದ ವಿಕಾಸವನ್ನು ಐತಿಹಾಸಿಕವಾಗಿ ಅವಲೋಕಿಸಿ, ಕಾಲದಿಂದ ಕಾಲಕ್ಕೆ ಪರಿಷ್ಕೃತಗೊಂಡ ತತ್ವಸ್ವರೂಪವನ್ನು ಗ್ರಂಥಸ್ಥ ಆಧಾರಗಳಿಂದ ಲೇಖಕ ಡಾ. ಕೆ.ಕೃಷ್ಣಮೂರ್ತಿ ಅವರು ನಿರೂಪಿಸಿದ್ದೇ -’ಕನ್ನಡದಲ್ಲಿ ಕಾವ್ಯ ತತ್ವ’.

ಸಂಸ್ಕೃತ ಕಾವ್ಯ ಮೀಮಾಂಸಕರ ಸಿದ್ಧಾಂತಗಳಿಗೂ, ಕನ್ನಡ ಲಾಕ್ಷಣಿಕರ ವಿಚಾರ ಸರಣಿಗೂ ಸಾಮ್ಯ-ವೈಷಮ್ಯಗಳನ್ನು ಗುರುತಿಸುವುದು ಹಾಗೂ ಕನ್ನಡ ಮಹಾಕವಿಗಳ ಕೃತಿಯಲ್ಲಿ ಪ್ರಾಸಂಗಿಕವಾಗಿ ಮೂಡಿಬರುವ ವಿಮರ್ಶೆಯನ್ನು ವಿವರಿಸುವುದು ಇಂತಹ ಉದ್ದೇಶಗಳೊಂದಿಗೆ ಈ ಕೃತಿ ರಚಿತವಾಗಿದೆ ಎಂದು ಲೇಖಕರು ಹೇಳುತ್ತಾರೆ. ಈ ಕೃತಿಯು ಮೊದಲು 1964ರಲ್ಲಿ ಮುದ್ರಣಗೊಂಡು, 4ನೇ ಬಾರಿ ಮರುಮುದ್ರಣಗೊಂಡಿದೆ.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books