ಸಾಹಿತ್ಯ ಸ್ಪಂದನ

Author : ಅಹಿತಾನಲ (ನಾಗ ಐತಾಳ)

Pages 272

₹ 250.00




Year of Publication: 2015
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

'ಆಹಿತಾನಲ' ಎಂಬ ಕಾವ್ಯನಾಮದ ಶ್ರೀಯುತ ನಾಗ ಐತಾಳರು ಸುಮಾರು ಮೂರು ದಶಕಗಳಿಂದ ಎಡಬಿಡದೆ ಬರೆಹದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಅಮೆರಿಕನ್ನಡಿಗರಲ್ಲಿ ಹಿರಿಯರು. ಇವರು ರಚಿಸಿರುವ ಕೃತಿ ’ಸಾಹಿತ್ಯ ಸ್ಪಂದನ ’ 

ನಿವೃತ್ತರಾಗಿ ಕ್ಯಾಲಿಫೋರ್ನಿಯಾ ಅಲ್ಲಿ ನೆಲೆಸಿರುವ ಇವರು ಸಾಹಿತ್ಯಾಂಜಲಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ತಾವೇ ಬರೆದ ಲೇಖನಗಳನ್ನು ಒಟ್ಟುಗೂಡಿಸಿ ಸಾಹಿತ್ಯ ಸ್ಪಂದನ ಕೃತಿಯನ್ನು ಹೊರತಂದಿದ್ದಾರೆ. 

ಲೇಖಕರೇ ಅವರ ಈ ಕೃತಿಯ ಬಗ್ಗೆ ಹೇಳುವಂತೆ - ’ನಾನೊಬ್ಬ ಜೀವರಸಾಯನ ವೈಜ್ಞಾನಿಕ ಸಂಶೋಧನೆಯಲ್ಲಿ ತರಬೇತಿ ಪಡೆಯುತ್ತಿದ್ದಂತೆಯೇ, ಮುಂದೆ ಹೇಗೊ ಸಾಕಷ್ಟು ಸಾಹಿತ್ಯ ಅಧ್ಯಯನದ ಕಡೆಗೂ ಕಾಲ ನನ್ನನ್ನು ಕೊಂಡೊಯ್ದಿತು. ಅದರ ಫಲವಾಗಿ ಅಷ್ಟಿಷ್ಟು ಸಾಹಿತ್ಯ ಅಧ್ಯಯನವನ್ನೂ ಮಾಡುವ ಅವಕಾಶ ನನಗೆ ಒದಗಿ ಬಂದಿರುವುದನ್ನು ನಾನಿಲ್ಲ ಅಭಿಮಾನಪೂರ್ವಕ ನೆನೆಯುತ್ತಿದ್ದೇವೆ’ ಎಂದಿದ್ದಾರೆ.

ಕನ್ನಡದ ಹಲವು ಪ್ರಮುಖ ಸಾಹಿತಿಗಳನ್ನು ಕುರಿತ ಪ್ರಬುದ್ದ ಲೇಖನಗಳ ಸಂಕಲನವೆಂದೇ ಈ ಕೃತಿಯನ್ನು ಪರಿಗಣಿಸಲಾಗಿದೆ. ಶಿವರಾಮ ಕಾರಂತರು, ಡಿ.ವಿ.ಜಿ, ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ, ಮೊದಲಾದ ಸಾಹಿತಿಗಳ ಸಾಹಿತ್ಯದೊಂದಿಗೆ ತಮ್ಮ ಕೃತಿಯಲ್ಲಿ ಐತಾಳರು ಸ್ಪಂದಿಸಿದ್ದಾರೆ. ಇಪ್ಪತ್ತನೆಯ ಶತಮಾನದ ಖ್ಯಾತ ಕನ್ನಡ ಬರಹಗಾರರ ಕತೆ, ಕಾದಂಬರಿ ಮತ್ತು ಕವಿತೆಗಳನ್ನು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. 

About the Author

ಅಹಿತಾನಲ (ನಾಗ ಐತಾಳ)
(05 October 1932 - 29 October 2022)

ಅಹಿತಾನಲ ಎಂಬ ಕಾವ್ಯನಾಮದಿಂದ ಬರೆಯುವ ವಿಜ್ಞಾನಿ ನಾಗ ಐತಾಳ ಅವರು ಜನಿಸಿದ್ದು 1932ರ ಅಕ್ಟೋಬರ್‍ 5ರಂದು. ಮೂಲತಃ ಉಡುಪಿ ಜಿಲ್ಲೆಯ ಕೋಟದವರಾದ ಅವರು ಸದ್ಯ ಕ್ಯಾಲಿಫೋರ್ನಿಯಾದ ಅರ್‍ಕಾಡಿಯಾದ ನಿವಾಸಿ ಆಗಿರುವ ಐತಾಳರು ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿಯೂ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಅವರು ಅಧ್ಯಯನ ಮಾಡಿದ್ದಾರೆ.  ಭಾರತದಲ್ಲಿ ಪಿಎಚ್.ಡಿ. ಪದವಿ ಪಡೆದ ನಂತರ ಬಯೋಕೆಮಿಸ್ಟ್ರಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಕೆನಡಾಕ್ಕೆ ಹೋದರು. ಅದಾದ ಮೇಲೆ ಅಮೆರಿಕೆಗೆ ಹೋದ ಅವರು 1975ರಿಂದ 2001ರ ವರೆಗೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ ...

READ MORE

Related Books