ಸಾಹಿತ್ಯ ಮತ್ತು ಪ್ರಗತಿ

Author : ಅನುಪಮಾ ನಿರಂಜನ



Year of Publication: 2007
Published by: ಡಿ.ವಿ.ಕೆ. ಮೂರ್ತಿ
Address: #1498/1, ರಾಮಯ್ಯ ರೋಡ್, ಕೃಷ್ಣಮೂರ್ತಿ ಪುರಂ, ಮೈಸೂರು-570004

Synopsys

‘ಸಾಹಿತ್ಯ ಮತ್ತು ಪ್ರಗತಿ’ ಕೃತಿಯು ಅನುಪಮಾ ನಿರಂಜನ ಅವರ ವಿಮರ್ಶಾತ್ಮಕ ಬರಹಗಳ ಸಂಕಲನ. ಈ ಕೃತಿಯಲ್ಲಿ ಕೆಲವೊಂದು ಪ್ರಮುಖ ವಿಚಾರಗಳಾದ ಪ್ರಗತಿಶೀಲ ಸಾಹಿತ್ಯದ ಗೊತ್ತು ಗುರಿ, ಅಭಿರುಚಿ, ಪ್ರಗತಿಪ್ರಜ್ಞೆ, ದಲಿತ ಸಾಹಿತ್ಯ ವೇದಿಕೆ, ಬದುಕಿನ ಅರ್ಥ, ಕುಂತಿ ಒಂದು ಪ್ರಗತಿಪರ ನೋಟ, ವಿಶ್ವಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ, ಸಾಹಿತ್ಯದಿಂದ ಸಮಾಜ ಸುಧಾರಣೆ, ಮಹಿಳೆ ಮತ್ತು ಶೋಷಣೆ, ಗ್ರಾಮೀಣ ಜನತೆ ಮತ್ತು ಸಾಹಿತ್ಯ, ಭಾಷಾ ಬಾಂಧವ್ಯ, ವಾಸ್ತವತೆ, ಸಾಹಿತ್ಯ ಮತ್ತು ಲೇಖಕ ಈ ಎಲ್ಲಾ ವಸ್ತುಗಳನ್ನು ಕೃತಿಯು ಒಳಗೊಂಡಿದೆ.

 

About the Author

ಅನುಪಮಾ ನಿರಂಜನ
(17 May 1934 - 15 February 1991)

ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು.  ಕಥಾಸಂಕಲನಗಳು- ...

READ MORE

Related Books