ಯು.ಆರ್. ಅನಂತಮೂರ್ತಿ - ವೈಚಾರಿಕತೆ ಮತ್ತು ಸಾಹಿತ್ಯ

Author : ಜಿ.ಎಸ್. ಆಮೂರ

Pages 194

₹ 135.00




Year of Publication: 2013
Published by: ಮನೋಹರ ಗ್ರಂಥ ಮಾಲಾ
Address: ಶಿವಾಜಿ ಬೀದಿ, ಸುಭಾಶ ರಸ್ತೆ, ಧಾರವಾಡ

Synopsys

ಲೇಖಕ-ವಿಮರ್ಶಕ ಪ್ರೊ. ಜಿ.ಎಸ್. ಆಮೂರ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ .ಅವರ ವೈಚಾರಿಕತೆ ಹಾಗೂ ಸಾಹಿತ್ಯ ಕುರಿತು ಬರೆದ ಕೃತಿ. ಸನಾತನ ಧರ್ಮ, ಭಾರತೀಯ ಸಂಸ್ಕೃತಿ, ಸಾಮಾನ್ಯರ ಆಚರಣೆ-ವಿಚಾರಗಳ ಸಂಘರ್ಷ, ಜಾತಿಶ್ರೇಣಿಯ ಮೇಲು-ಕೀಳು ಇತ್ಯಾದಿ ಆಯಾಮಗಳ ಮೂಲಕ ಸಂಸ್ಕಾರ ಕಾದಂಬರಿಯನ್ನು ಉತ್ತಮ ಸಾಹಿತ್ಯ ಕೃತಿಯಾಗಿ ರೂಪಿಸಿದ ಅನಂತಮೂರ್ತಿ ಅವರ ಭಾರತೀಪುರ, ಅವಸ್ಥೆ, ಭವ ಕಾದಂಬರಿಗಳು ಸೇರಿದಂತೆ ಅವರ ಕಥೆ--ಕಾವ್ಯ--ಲೇಖನಗಳು ಹೀಗೆ ವಿವಿಧ ಕೃತಿಗಳ ವಿಮರ್ಶೆ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.

ಭಾರತೀಯ ಸಂಸ್ಕೃತಿ -ಆಚರಣೆಗಳನ್ನು ಅವರ ವ್ಯಕ್ತಿಗತ ವಿಚಾರ ಹಾಗೂ ಸಾಹಿತ್ಯಕವಾಗಿ ಕಂಡ ಕಾಣ್ಕೆಗಳ ತೀಕ್ಷಣತೆಗಳನ್ನು ತೌಲನಿಕವಾಗಿ ವಿಮರ್ಶೆಯ ಚೌಕಟ್ಟಿಗೆ ಅಳವಡಿಸಿದ್ದು, ಲೇಖಕ ಜಿ.ಎಸ್. ಆಮೂರ ಅವರ ಈ ಕೃತಿಯ ವೈಶಿಷ್ಟ್ಯ. ಅವರ ಗಂಭೀರ ಚಿಂತನೆಗಳು ಸಾಹಿತ್ಯದಲ್ಲಿ ಹೇಗೆ ಬಿಂಬಿತವಾಗಿವೆ ಮತ್ತು ಹೇಗೆ ಅವು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ ಎಂಬ ವೈಚಾರಿಕ ಆಯಾಮಗಳನ್ನು ಈ ಬರಹಗಳಲ್ಲಿ ಕಾಣಬಹುದು.

About the Author

ಜಿ.ಎಸ್. ಆಮೂರ
(08 May 1925 - 28 September 2020)

ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...

READ MORE

Related Books